ದಾವಣಗೆರೆ: ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆ ಕಟ್ಟಿದವರು, ಬೆಳೆಸಿದವರು, ಕಸಿದುಕೊಂಡವರು ಯಾರೆಂದು ದಾವಣಗೆರೆ ಎಲ್ಲ ಜನಸಾಮಾನ್ಯರಿಗೆ ಗೊತ್ತಿದೆ. ಅದೇ ರೀತಿ ಅಖಿಲ ಭಾರತ ವೀರಶೈವ ಮಹಾಸಭೆ ದುಡ್ಡಿದ್ದವರ, ಕೇವಲ ಕಾಂಗ್ರೆಸ್ ವೀರಶೈವರ ಹಾಗೂ ಶ್ರೀಮಂತರ ಪಾಲಾಗಿದೆ ಎಂದು ಎಂದು ಶಾಸಕ ಬಿ.ಪಿ. ಹರೀಶ್ ಕಿಡಿಕಾರಿದರು.
ದಾವಣಗೆರೆ: ಕ್ರಿಪ್ಟೋ ಕರೆನ್ಸಿ ವಂಚನೆ; ನಾಲ್ವರ ವಿರುದ್ಧ ಎಫ್ ಐಆರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಅವರು ವೀರಶೈವ ಸಮಾಜದ ಸಭೆ ನಡೆಸಿ ದಾವಣಗೆರೆಯ ಜನತೆಗೆ ಬಹಳಷ್ಟು ಸುಳ್ಳು ಮಾಹಿತಿ ನೀಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ದುಡ್ಡಿದ್ದವರ, ಕೇವಲ ಕಾಂಗ್ರೆಸ್ ವೀರಶೈವರ ಹಾಗೂ ಶ್ರೀಮಂತರ ಪಾಲಾಗಿದೆ ಎಂದು ಆರೋಪ ಮಾಡಿದರು.
ದಾವಣಗೆರೆ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಅಧಿಕ ಲಾಭ ಆಮಿಷ; ವ್ಯಕ್ತಿಯೊಬ್ಬರಿಗೆ 37 ಲಕ್ಷ ವಂಚನೆ
ಮಲ್ಲಿಕಾರ್ಜುನ್ ಅವರ ಮನೆತನದ ಎಲ್ಲರನ್ನೂ ಮುಳುಗಿಸಿದರು
ಮಲ್ಲಿಕಾರ್ಜುನ್ ಅವರು ಮನೆತನದ ಎಲ್ಲರನ್ನೂ ಮುಳುಗಿಸಿ ಅವರ ಪಾಲು ಮಾಡಿಕೊಂಡು ಬಂದ ದುಷ್ಟ. ಇವರಿಂದ ವೈದ್ಯಕೀಯ-ಎಂಜಿನಿಯರಿಂಗ್ ಕಾಲೇಜು ಆಗಲೀ ಆಗಿಲ್ಲ ಎಂದು ತಿಳಿಸಿದರು. ಇದರ ಹಿಂದೆ ಬಹಳಷ್ಟು ಮನೆತನಗಳ ತ್ಯಾಗ ಇದೆ. ಅದನ್ನು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು. ಬಡ ಮಹಿಳೆಯರ ತಾಳಿ ಕಿತ್ತುಕೊಳ್ಳುವ ಡಿಸ್ಟಿಲರಿ ಸ್ಥಾಪಿಸಿದ್ದನ್ನು ಈಶ್ವರ ಖಂಡ್ರೆಯವರು ಹೆಗ್ಗಳಿಕೆಯಂತೆ ಹೇಳಿದ್ದಾರೆ ಎಂದು ದೂರಿದರು.
ಸಕ್ಕರೆ ಕಾರ್ಖಾನೆ, ಡಿಸ್ಟಿಲರಿಗಳಿಂದ ಕೈಗಾರಿಕಾ ತ್ಯಾಜ್ಯ
ಮಹಾಸಭಾ ಮೂಲಕ ರಾಜಕೀಯ ಪಕ್ಷಗಳನ್ನು ಹೆದರಿಸಿ ಮಂತ್ರಿ ಸ್ಥಾನ ಪಡೆದು ದುರುಪಯೋಗಪಡಿಸಿಕೊಂಡಿದ್ದಾರೆ. ಬಡ ವೀರಶೈವರಿಗೆ ಇವರಿಂದ ಯಾವುದೇ ಕೊಡುಗೆ ಇಲ್ಲ.ಈಶ್ವರ ಖಂಡ್ರೆ ಅವರು ಸಮರ್ಥ ತಂದೆಯ ಒಡೆತನದ ಸಕ್ಕರೆ ಕಾರ್ಖಾನೆ, ಡಿಸ್ಟಿಲರಿಗಳಿಂದ ಕೈಗಾರಿಕಾ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೇ ನೇರವಾಗಿ ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಅರಣ್ಯ ಸಚಿವರಾದ ತಮ್ಮ ಅಧೀನದಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯೂ ಇದೆ. ಇಂತಹ ಅಭ್ಯರ್ಥಿ ಪರವಾಗಿ ತಾವು ಮಾತನಾಡಿರುವುದು ಸರಿಯೇ ಎಂದು ಕೇಳಿದರು.
ಶಾಮನೂರು ಶಿವಶಂಕರಪ್ಪ ಕೊಡುಗೆ ಎಂದು ಸುಳ್ಳು ಮಾಹಿತಿ
ರೈತರ ಜಮೀನಿನ ಬೆಳೆಗಳ ಮೇಲೆ ಹಾರು ಬೂದಿ ಧೂಳು ಬೀಳುತ್ತಿದೆ. ಬಡ ರೈತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ ಸದನದಲ್ಲಿ ಎತ್ತಿದಾಗ ಖಂಡ್ರೆಯವರು ಸುಳ್ಳು ಮಾಹಿತಿ ಕೊಟ್ಟಿದ್ದರು. ಖಂಡ್ರೆಯವರೇ, ಮಲ್ಲಿಕಾರ್ಜುನ್ ಅವರ ದುರಾಡಳಿತ, ಕುಡಿಯುವ ನೀರಿನ ಮೇಲಿನ ದುಷ್ಪರಿಣಾಮ ನಿಮಗೆಲ್ಲ ಗೊತ್ತಿದೆ. ಎವಿಕೆ ಕಾಲೇಜು ಸ್ಥಾಪಿಸಿ ಯುವತಿಯರಿಗೆ ಶಿಕ್ಷಣ ಸಿಗುವಂತೆ ಮಾಡಿದ್ದಾಗಿ ಹೇಳಿದ್ದೀರಿ. ಖಂಡ್ರೆಯವರೇ, ಸುಳ್ಳು ಮಾಹಿತಿ ಕೊಡಬೇಡಿಎಂದರು.
ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಲು ರಾಜನಳ್ಳಿ, ಅಜ್ಜಂಪುರ ಮನೆತನದವರು, ದಾನಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಚಿಗಟೇರಿ ಆಸ್ಪತ್ರೆಯನ್ನು ಆ ಮನೆತನದವರ ಕೊಡುಗೆಯಿಂದ ಸ್ಥಾಪಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಅವರು ಆ ಕೊಡುಗೆ ನೀಡಿದ್ದಾಗಿ ಸುಳ್ಳು ಹೇಳಿದ್ದೀರಲ್ಲವೇ ಎಂದು ಕೇಳಿದರು.
ನೂರಾರು ಪ್ರಾಣಿ ಹಿಂಸೆ
ಶಾಮನೂರು ಶಿವಶಂಕರಪ್ಪ ಅವರ ಪುತ್ರ ನೂರಾರು ಪ್ರಾಣಿ ಹಿಂಸೆ ಮಾಡಿ, ಅನೇಕ ಕೃಷ್ಣಮೃಗಗಳನ್ನು ಹಿಡಿದಿದ್ದಾರೆ. ಇಡೀ ಸಮಾಜವನ್ನು ಪ್ರತಿನಿಧಿಸುವ ಅಧ್ಯಕ್ಷರಾಗಿ ಅವರ ಮನೆಯಲ್ಲಿ ಶೇ 15ರಷ್ಟು ಸಸ್ಯಾಹಾರವನ್ನೂ ಸೇವಿಸಿಲ್ಲ ಎಂದು ಆಕ್ಷೇಪಿಸಿದರು. ಇದು ನಮ್ಮ ಸಂಸ್ಕೃತಿಯೇ? ಅದನ್ನು ನಾವು ಒಪ್ಪಿಕೊಳ್ಳಬೇಕೇ ಎಂದು ಹೇಳಿದರು. ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಒಬ್ಬ ರಾಜಕಾರಣಿ ಇರಬಾರದು ಎಂದು ನುಡಿದರು. ಇವರಿಂದ ವೀರಶೈವರಿಗೆ ನ್ಯಾಯ ನೀಡಲು ಸಾಧ್ಯವಾಗದು ಎಂದು ತಿಳಿಸಿದರು. ಮಹಾಸಭೆಯಲ್ಲಿ ಸಾಮಾನ್ಯ ವೀರಶೈವರು ಇಲ್ಲ ಎಂದು ದೂರಿದರು.
ಬಾಪೂಜಿ ವಿದ್ಯಾಸಂಸ್ಥೆ ಕಟ್ಟಿದವರು ಯಾರು ಎಂದು ಎಲ್ಲರಿಗೂ ಗೊತ್ತಿದೆ
ದಾವಣಗೆರೆಯಲ್ಲಿ ವೈದ್ಯಕೀಯ-ಎಂಜಿನಿಯರಿಂಗ್ ಕಾಲೇಜು, ಬಾಪೂಜಿ ವಿದ್ಯಾಸಂಸ್ಥೆ ಬಗ್ಗೆ ಜನಸಾಮಾನ್ಯರಿಗೆ ತಿಳಿದಿದೆ. ಇದನ್ನು ಕಟ್ಟಿದವರು, ಬೆಳೆಸಿದವರು, ಕಸಿದುಕೊಂಡವರು ಯಾರೆಂದು ಜನಸಾಮಾನ್ಯರಿಗೆ ಗೊತ್ತಿದೆ ಎಂದು ಗಮನ ಸೆಳೆದರು. ಶಿವಶಂಕರಪ್ಪನವರು ನಿಧನರಾದ ಮನೆತನದ ಸದಸ್ಯರನ್ನು ದೂರವಿಟ್ಟು ತಮ್ಮ ಮನೆಮಂದಿಯನ್ನು ಸೇರಿಸುತ್ತ ಬಂದರು. ಆದರೆ, ಅದಕ್ಕಿಂತ ಮುಂದೆ ಹೋದ ಭ್ರಷ್ಟ, ದುರಾಡಳಿತ ಮಾಡುವ ನಮ್ಮ ಜಿಲ್ಲಾ ಸಚಿವರು ಅವರ ಮನೆತನದವರನ್ನೂ ಇಲ್ಲದಂತೆ ಮಾಡಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಅವರ ಸೋದರರು ಇಲ್ಲ. ಅವರು, ಅವರ ಶ್ರೀಮತಿ, ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುವವರಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜಶೇಖರ್ ವೀರೇಶ್, ಪ್ರಮುಖರಾದ ವಿಜೇಂದ್ರ ಡಿ.ಟಿ., ಅವಿನಾಶ್ ಪಿ.ಎಸ್., ವಿಶ್ವಾಸ್ ಮತ್ತಿತರರು ಇದ್ದರು.



