ದಾವಣಗೆರೆ: ಜಮೀನು ಮಾರಾಟ ಮಾಡಿ ಹಣದೊಂದಿಗೆ ಓಮಿನಿ ವ್ಯಾನ್ ನಲ್ಲಿ ಹೋಗುತ್ತಿದ್ದ ವರ್ತಕನ ಅಡ್ಡಗಟ್ಟಿ ಹಲ್ಲೆ ನಡೆಸಿ ₹38 ಲಕ್ಷ ನಗದು, ಮೊಬೈಲ್, ದಾಖಲೆ ಪತ್ರಗಳನ್ನು ದರೋಡೆ ಮಾಡಿಕೊಂಡು ಹೋಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಅರಕೆರೆ ಎ.ಕೆ. ಕಾಲೋನಿ ಸಮೀಪ ಶುಕ್ರವಾರ ಮುಂಜಾನೆ 4 ಗಂಟೆ ವೇಳೆಗೆ ನಡೆದಿದೆ.
ದಾವಣಗೆರೆ: ಮರಳು ಗಣಿಗಾರಿಕೆ ಮೇಲೆ ದಾಳಿ; 40 ಟನ್ ಮರಳು ವಶ
ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಭದ್ರಾವತಿ ತಾಲೂಕಿನ ಮೈದೊಳಲು ಮಲ್ಲಾಪುರ ಗ್ರಾಮದ ಕಿರಾಣಿ ವರ್ತಕ ಮಾಲತೇಶ್ ಹಣ ಕಳೆದುಕೊಂಡವರು. ಹೊನ್ನಾಳಿ ತಾ. ಹೊಸಹಳ್ಳಿಯ 2ನೇ ಕ್ಯಾಂಪ್ ಸ್ವಂತ ಊರಾಗಿದ್ದು, ಹಲವಾರು ವರ್ಷದಿಂದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮೈದೊಳಲು ಮಲ್ಲಾಪುರದಲ್ಲಿ ನೆಲೆಸಿದ್ದಾರೆ.
ಮಾಲತೇಶ್, ಹೊಸಪೇಟೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರ ಗ್ರಾಮದಲ್ಲಿದ್ದ ತನ್ನ 10 ಎಕರೆ 58 ಸೆಂಟ್ಸ್ ಜಮೀನನ್ನು ಮಾಲತೇಶ್ ಹೊಸಪೇಟೆಯ ಡಾಕ್ಟರ್ ಒಬ್ಬರಿಗೆ ಮಾರಾಟ ಮಾಡಿದ್ದರು. ಜಮೀನು ಮಾರಾಟದ 1.21 ಕೋಟಿ ಹಣವನ್ನು ಮರಿಯಮ್ಮನಹಳ್ಳಿಯಲ್ಲಿ ಪಡೆದುಕೊಂಡಿದ್ದ ಮಾಲತೇಶ್ ಅವರು, ಹೊಸಪೇಟೆಯ ಬಾಬುಲಾಲ್ ಹತ್ತಿರ ತಾವು ಮಾಡಿದ್ದ ₹36 ಲಕ್ಷ ಸಾಲಕ್ಕೆ ಹಣ ಪಾವತಿ ಮಾಡಿದ್ದಾರೆ.
ದಾವಣಗೆರೆ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿ
ಬಳಿಕ ರಿಜೆಸ್ಟ್ರೇಷನ್ ಇತರೆ ಖರ್ಚುಗಳನ್ನು ಕಳೆದು ಉಳಿದಿದ್ದ ₹76 ಲಕ್ಷಗಳನ್ನು ಮಾಲತೇಶ್ ಎರಡು ಚೀಲಗಳಲ್ಲಿ ಗಂಟುಕಟ್ಟಿಕೊಂಡಿದ್ದರು. ಒಂದು ಚೀಲದಲ್ಲಿ ₹38 ಲಕ್ಷ ಹಾಗೂ ಮತ್ತೊಂದು ಚೀಲದಲ್ಲಿ ₹36 ಲಕ್ಷ ಹಾಗೂ ತನ್ನ ಜೇಬಿನಲ್ಲಿ ₹2 ಲಕ್ಷ ಇಟ್ಟುಕೊಂಡಿದ್ದರು. ಬಳಿಕ ಮೈದೊಳಲು ಮಲ್ಲಾಪುರದ ಸ್ನೇಹಿತ ಮಾನಾಚಾರಿ ಜೊತೆ ಓಮಿನಿಯಲ್ಲಿ ಹರಪನಹಳ್ಳಿ, ಹರಿಹರ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಮಲೇಬೆನ್ನೂರು ಬಳಿ ಹಿಂದಿನಿಂದ ಬರುತ್ತಿದ್ದ ಬೂದು ಬಣ್ಣದ ಕಾರು ವರ್ತಕ ಮಾಲತೇಶ್ ಇದ್ದ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದು ಸಾಗಿದ್ದಾರೆ.
ಆಗ ಮಾಲತೇಶ ಹಾಗೂ ಮಾನಾಚಾರಿ ಭಯಗೊಂಡು ತಮ್ಮ ವಾಹನವನ್ನು ಮತ್ತಷ್ಟು ಜೋರಾಗಿ ಚಾಲನೆ ಮಾಡಿದ್ದಾರೆ. ಆಗ ಬೂದು ಬಣ್ಣದ ಕಾರು ಮತ್ತೆ ಜೋರಾಗಿ ಬಂದು ಒಮಿನಿ ವಾಹನಕ್ಕೆ ಅಡ್ಡಗಟ್ಟಿ ನಿಲ್ಲಿಸಿ, ಜಗಳ ತೆಗೆದಿದ್ದಾರೆ. ಹಲ್ಲೆ ನಡೆಸಿ ಹೆದರಿಸಿದ್ದಾರೆ.
ದರೋಡೆ ಕೋರರಿಂದ ತಪ್ಪಿಸಿಕೊಳ್ಳಲು ಮಾಲತೇಶ ಹಾಗೂ ಮಾನಾಚಾರಿ ಸ್ವಲ್ಪ ದೂರ ಓಡಿಹೋಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ನಾಲ್ವರು ದರೋಡೆಕೋರರೂ ಒಮಿನಿ ವಾಹನದ ಬಳಿ ಬಂದು ₹38 ಲಕ್ಷವಿದ್ದ ಚೀಲ ಹಾಗೂ ಬಟ್ಟೆ, ಭೂದಾಖಲೆಗಳಿದ್ದ ಮತ್ತೊಂದು ಚೀವವನ್ನು ಹಣದ ಚೀಲವೆಂದು ತಿಳಿದು ಎತ್ತಿಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರು ತೆರಳಿದ ತಕ್ಷಣ ತಮ್ಮ ವಾಹನ ಬಳಿ ಬಂದು ನೋಡಿದಾಗ ಒಮಿನಿಯ ಸೀಟ್ ಕೆಳಗೆ ₹36 ಲಕ್ಷವಿದ್ದ ಚೀಲ ಮಾತ್ರ ಬಿಟ್ಟು ಹೋಗಿದ್ದಾರೆ. ಅನಂತರ ಮಲೇಬೆನ್ನೂರಿನ ಬಂಧುಗಳ ಮನೆಗೆ ತೆರಳಿ ಕಳ್ಳರಿಂದ ಬಚಾವಾದ ಹಣವನ್ನಿಟ್ಟು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
38 ಲಕ್ಷ ದರೋಡೆ ಘಟನೆ ತಿಳಿದ ತಕ್ಷಣ ಎಸ್ಪಿ ಎಚ್.ಟಿ.ಶೇಖರ್ ಹಾಗೂ ಚನ್ನಗಿರಿ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.



