ದಾವಣಗೆರೆ: ಕಳೆದ ಎರಡ್ಮೂರು ದಿನದ ಹಿಂದೆ ವಿಮಾನ ಕಡಿಮೆ ಎತ್ತರದಲ್ಲಿ ಹಾರಿದ ಅನುಭವ ನಿಮಗೂ ಆಗಿದೆಯಾ..? ಇದಕ್ಕೆ ಕಾರಣ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು ಸಹಜ. ಒಂದೆಡೆ ಇರಾನ್- ಇಸ್ರೇಲ್ ಯುದ್ಧ ಭೀತಿಯಲ್ಲಿರುವ ಜನ, ಈ ರೀತಿ ವಿಮಾನ ಕೆಳ ಹಂತದಲ್ಲಿ ಹಾರಾಟ ನಡೆಸಿದ್ದಕ್ಕೆ ಆತಂಕಗೊಂಡಿದ್ದರು.
ಇದಕ್ಕೆ ದಾವಣಗೆರೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ವತಿಯಿಂದ ವೈಮಾನಿಕ ಸಮೀಕ್ಷೆ ನಡೆಯುತ್ತಿದ್ದು, ಲಘು ವಿಮಾನಗಳು ಕಡಿಮೆ ಎತ್ತರದಲ್ಲಿ ಹಾರಾಡುತ್ತಿವೆ. ಈ ಬಗ್ಗೆ ಸಾರ್ವಜನಿಕರಲ್ಲಿ ಸಮರ್ಪಕ ಮಾಹಿತಿ ನೀಡದಿದ್ದರಿಂದ ಜನರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿತ್ತು.
ಕಡಿಮೆ ಎತ್ತರದಲ್ಲಿ ಲಘು ವಿಮಾನ ಹಾರಾಟಮಾಡುತಿರುವುದನ್ನು ಗ್ರಾಮೀಣ ಪ್ರದೇಶದ. ಗಮನಿಸಿದ್ದಾರೆ. ಇದು ವೈಮಾನಿಕ
ಸಮೀಕ್ಷೆಯಾಗಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸಷ್ಟಪಡಿಸಿದೆ.
ಜಿಐಎಸ್ ಸಂಸ್ಥೆವೈಮಾನಿಕ ಸಮೀಕ್ಷೆಯ ಮೂಲಕ ಅರಣ್ಯ, ಕೃಷಿಭೂಮಿ, ರಸ್ತೆ, ಜನವಸತಿ ಪ್ರದೇಶ ಸೇರಿದಂತೆ ಅಂತರ್ಜಲಮಟ್ಟ, ಖನಿಜ ಸಂಪತ್ತು. ಭೂಗರ್ಭದ ರಚನೆಗಳ ಕುರಿತು ಅಧ್ಯಯನ ಕೈಗೊಳ್ಳುತ್ತಿದೆ ಎಂದು ಮೂಲಗಳು
ಮಾಹಿತಿ ನೀಡಿವೆ.
ದಾವಣಗೆರೆ: ಸರಗಳ್ಳತನ ಮಾಡುತ್ತಿದ್ದ 5 ಆರೋಪಿಗಳ ಬಂಧನ; 22.12 ಲಕ್ಷ ಮೌಲ್ಯದ ಬಂಗಾರದ ಆಭರಣ,ಕಾರು, ಬೈಕ್ ವಶ
ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ವೈಮಾನಿಕ ಸಮೀಕ್ಷೆ ದಾವಣಗೆರೆ ಜಿಲ್ಲೆ ಪ್ರವೇಶಿಸಿದಂತೆ ಕಾಣುತ್ತಿದೆ. ಇದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲಎಂದುಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.



