ಭದ್ರಾ ಜಲಾಶಯ: ಕೊನೆ ಭಾಗಕ್ಕೆ ತಲುಪದ ನೀರು; ತರಾಟೆ ತೆಗೆದುಕೊಂಡ ರೈತರು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ಭದ್ರಾ ಜಲಾಶಯದದಿಂದ ನಾಲೆ ನೀರು ಬಿಟ್ಟು 40 ದಿನ ಕಳೆದರೂ ಕೊನೆ ಭಾಗದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆ ತೆಗೆದುಕೊಂಡರು.

ಒಂದೂವರೆ ವರ್ಷಕ್ಕೆ ರಕ್ತ ಕಾನ್ಸರ್; ಮೂರುವರೆ ವರ್ಷಕ್ಕೆ ಎಸ್ಪಿ…! ಅಪ್ಪನ ಕನಸು ನನಸು…!

ಭದ್ರಾ ಉಪ ವಿಭಾಗದ‌‌ ನಾಲೆಯ ಮತ್ತಿ, ತಿಮ್ಮಪ್ಪ ಕ್ಯಾಂಪ್, ಗೋಣಿವಾಡ, ದಾಸಪ್ಪ ನಗರ, ಕಾರಿಗನೂರು ಕ್ಯಾಂಪ್, ಆಂಜನೇಯ ನಗರ, ಕುಕ್ಕವಾಡ, ಕೊಳೇನಹಳ್ಳಿ ಗ್ರಾಮದ ರೈತರು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ: 2 ಸಾವಿರ ಮೌಲ್ಯದ ಟಿವಿ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ; 28 ವರ್ಷ ಬಳಿಕ ಬಂಧನ

ಕುಕ್ಕವಾಡದ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ರೈತ ಮುಖಂಡ ತೇಜಸ್ವಿ ಪಟೇಲ್ ಅಧ್ಯಕ್ಷತೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಭದ್ರಾ ಜಲಾಶಯದಿಂದ ನಳೆಗೆ ನೀರು ಬಿಟ್ಟು 40. ದಿನ ಕಳೆದರೂ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಪಂಪ್ ಸೆಟ್ ತೆರವುಗೊಳಿಸಿ

ಪೊಲೀಸ್ ಇಲಾಖೆ, ಬೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಅಕ್ರಮ ಪಂಪ್‌ಸೆಟ್ ತೆರವು ಮಾಡಬೇಕು. ರೈತರಿಂದ ಅಹಿತಕರ ಘಟನೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ

-ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಬಿ. ಚನ್ನಬಸಪ್ಪ

ನೀರು ನಿರ್ವಹಣೆಯಲ್ಲಿ ಅಧಿಕಾರಿಗಳಿಗೆ ಬದ್ಧತೆ‌ ಇದ್ದರೆ ಕೊನೆ ಭಾಗದ ರೈತರಿಗೆ ನೀರು ಹರಿಸಬಹುದು. ಅಧಿಕಾರಿಗಳು ಕಾಲುವೆಗಳ ಸ್ಥಿತಿ ಪರಿಶೀಲಿಸಬೇಕು.

– ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ, ರೈತ ಮುಖಂಡ ತೇಜಸ್ವಿ ಪಟೇಲ್

ಬುಧವಾರದಿಂದ ನಾಲ್ಕು ದಿನ ರಾತ್ರಿ, ಹಗಲು ಕಾಲುವೆ ತುಂಬಾ ನೀರು ಹರಿಸಲಾಗುವುದು.

ಎಇಇ ರಮೇಶ್

ಸಹಾಯಕ ಅಧಿಕಾರಿ ಮಧು, ಎಂಜಿನಿಯರ್ ತಿಪ್ಪೇಶ್, ರಘುವೀರ್, ಸತೀಶ್ ಕೊಳೇನಹಳ್ಳಿ, ಮಲ್ಲೇಶಪ್ಪ, ಕೃಷಿಕ ಮಂಜುನಾಥ್, ಗಂಗಾಧರ್, ವಕೀಲ ಹನುಮಂತಪ್ಪ, ಎನ್. ಎಂ. ಮಂಜುನಾಥ್, ಕೆ.ಎನ್. ಮಂಜುನಾಥ್ ಇತರರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *