ದಾವಣಗೆರೆ: ಮನೆ ಬೀಗ ಮುರಿದು ಮನೆ ಕಳ್ಳತನ ಪ್ರಕರಣ; ಇಬ್ಬರ ಬಂಧನ, 4.6 ಲಕ್ಷ ಬೆಲೆಯ ಚಿನ್ನ, ಬೆಳ್ಳಿ ವಶ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಮನೆ ಬೀಗ ಮುರಿದು ಮನೆ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.‌ ಆರೋಪಿಗಳಿಂದ 4.6 ಲಕ್ಷ ಬೆಲೆಯ ಚಿನ್ನ, ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ: ರೈಲ್ವೆ ಸ್ಟೇಷನ್- ಪಾಲಿಕೆ ನಡುವೆ ಪಾದಚಾರಿ ಮೇಲ್ಸೇತುವೆ; ಧೂಡಾದಿಂದ ಹೊಸ ಬಡಾವಣೆ ಅಭಿವೃದ್ಧಿ

ಜ. 12 ರಂದು ಹರಿಹರ ಜೆ.ಸಿ.ಬಡಾವಣೆ ಜಬೀನಾ ಎಂಬುವವರ ಮನೆ ಬೀಗ ಮುರಿದು 44,000/-ರೂ ಬೆಲೆಯ ಬೆಳ್ಳಿ, ಬಂಗಾರ ಕಳ್ಳತನವಾದ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಈ ಪ್ರಕರಣದಲ್ಲಿನ ಆರೋಪಿ‌ಹಾಗೂ ಸ್ವತ್ತಿನ ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪಿಐ ಆರ್.ಎಫ್.ದೇಸಾಯಿ ನೇತೃತ್ವದಲ್ಲಿ ಪಿಎಸ್ ಐ ಹೆಚ್.ಎಸ್.ಮಂಜುನಾಥಸ್ವಾಮಿ, ಶ್ರೀಪತಿ ಗಿನ್ನಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ಪೊಲೀಸ್ ತಂಡವು ಕಾರ್ಯಚರಣೆ ಕೈಗೊಳ್ಳಲಾಗಿದೆ.

ದಾವಣಗೆರೆ: ಇಂಜಿನಿಯರಿಂಗ್ ಮುಗಿಸಿದ ಯುವತಿ ಲೌಕಿಕ ಜೀವನ ತ್ಯಜಿಸಿ ಆಧ್ಯಾತ್ಮದ ಕಡೆ ಒಲವು; ಸಂನ್ಯಾಸತ್ವ ಸ್ವೀಕಾರ

ಹರಿಹರ ನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಆರೋಪಿಗಳಾದ 1] ಮಹಮ್ಮದ್ ಇಸ್ಮಾಯಿಲ್ @ ಪ್ಲಾಸ್ಟಿಕ್ ಕೊಡಪಾನ ಇಸ್ಮಾಯಿಲ್ (62) ಕೂಲಿ ಕೆಲಸ, ವಾಸ: ಟಿಪ್ಪುನಗರ 3ನೇ ಕ್ರಾಸ್ ಚನ್ನಗಿರಿ ಟೌನ್, ಸ್ವಂತ ವಿಳಾಸ: ಎಸ್.ಎಸ್.ಎಂ ನಗರ ದಾವಣಗೆರೆ ಹಾಗೂ ಕಳ್ಳತನ ಮಾಡಿದ ಸ್ವತ್ತು ಸ್ವೀಕರಿಸಿದ ಆರೋಪಿ 2] ರಹಮಾನ್ (37)ವ) ಕೂಲಿ ಕೆಲಸ, ವಾಸ: ಬೊಮ್ಮನಕಟ್ಟೆ, ಭದ್ರಾವತಿ ತಾಲೂಕ್, ಶಿವಮೊಗ್ಗ ಜಿಲ್ಲೆ. ಇವರನ್ನು ಬಂಧನ ಮಾಡಲಾಗಿದೆ.

ಆರೋಪಿಗಳಿಂದ ಮೇಲ್ಕಂಡ ಪ್ರಕರಣ ಸೇರಿದಂತೆ 02) ಬಸವನಗರ ಪೊಲೀಸ್ ಠಾಣೆ , 03) ಮಲೆಬೆನ್ನೂರು ಪೊಲೀಸ್ ಠಾಣೆ 04) ಮಲೆಬೆನ್ನೂರು ಪೊಲೀಸ್ ಠಾಣೆ 05) ಹರಿಹರ ನಗರ ಪೊಲೀಸ್ ಠಾಣೆ ಪ್ರಕರಣ ಒಟ್ಟು 05 ಪ್ರಕರಣಗಳಿಗೆ ಸಂಬಂಧಿಸಿದಂತೆ 33.22 ಗ್ರಾಂ ಬಂಗಾರ ಆಭರಣ & 161 ಗ್ರಾಂ ಬೆಳ್ಳಿಯ ಆಭರಣ ಒಟ್ಟು 4,06,000/-ರೂ ಬೆಲೆಯ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಆರೋಪಿತರ ಹಿನ್ನೆಲೆ: 1ನೇ ಆರೋಪಿತನಾದ ಮಹಮ್ಮದ್ ಇಸ್ಮಾಯಿಲ್ ಈತನು ದಾವಣಗೆರೆ ಜಿಲ್ಲೆಯಲ್ಲಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 36 ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು 06 ಪ್ರಕರಣಗಳಲ್ಲಿ ಸಜೆಯಾಗಿರುತ್ತದೆ.

ಮನೆ ಕಳ್ಳತನ ಪ್ರಕರಣಲ್ಲಿ ಕಾರ್ಯಾಚರಣೆ ನಡೆಸಿದ ತಂಡವನ್ನು ಎಸ್ಪಿ ಉಮಾಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಕೆ.ಎಸ್.ಪಿ.ಎಸ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಸೂಚನೆ: ಸದರಿ ಪ್ರಕರಣಗಳ ಪತ್ತೆ ಮಾಡಲು ಬಹಳ ಕ್ಲಿಷ್ಟಕರವಾದ ಕರ್ತವ್ಯ ನಿರ್ವಹಿಸಿದ್ದು, ಸಾರ್ವಜನಿಕರು ಮನೆ ಬಿಡುವಾಗ ಬೀಗ ಹಾಕಿದ ಮನೆಗಳ ಬಗ್ಗೆ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡುವುದು ಹಾಗೂ ಸಿಸಿಟಿವಿ ಅಳವಡಿಸಿ ಪೊಲೀಸರಿಗೆ ಸಹಕರಿಸಲು ಸೂಚಿಸಲಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *