ದಾವಣಗೆರೆ: ಸದಾ ಜನ ದಟ್ಟಣಿ ಇರುವ ರೈಲ್ವೆ ಸ್ಟೇಷನ್ –ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಪಾದಚಾರಿ ಮೇಲ್ಸೇತುವೆ (skywalk) ನಿರ್ಮಾಣ ಮಾಡಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚಿಸಿದರು.
ಮುಂಬರುವ ಗ್ರಾಮ ಪಂಚಾಯತಿ, ZP, TP ಚುನಾವಣೆಯಲ್ಲೂ ಬ್ಯಾಲೆಟ್ ಪೇಪರ್ ; ಸರ್ಕಾರ ನಿರ್ಧಾರ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ಧೂಡಾ) ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ: ಇಂಜಿನಿಯರಿಂಗ್ ಮುಗಿಸಿದ ಯುವತಿ ಲೌಕಿಕ ಜೀವನ ತ್ಯಜಿಸಿ ಆಧ್ಯಾತ್ಮದ ಕಡೆ ಒಲವು; ಸಂನ್ಯಾಸತ್ವ ಸ್ವೀಕಾರ
77 ಎಕರೆ ಜಮೀನಿನಲ್ಲಿ ಹೊಸ ಬಡಾವಣೆ ನಿರ್ಮಾಣ
ದಾವಣಗೆರೆ ತಾಲ್ಲೂಕಿನ ಅವರಗೊಳ್ಳ ಹಾಗೂ ದೊಡ್ಡಬೂದಿಹಾಳು ಗ್ರಾಮಗಳ ಸುತ್ತ ಮುತ್ತ ಒಟ್ಟು 77 ಎಕರೆ ಜಮೀನಿನಲ್ಲಿ ಹೊಸ ವಸತಿ ಬಡಾವಣೆ ನಿರ್ಮಾಣ ಧೂಡಾ ಮುಂದಾಗಿದೆ. ಈ ಗ್ರಾಮಗಳಲ್ಲಿ ಜಮೀನನ್ನು ರೈತರಿಂದ ನೇರ ಖರೀದಿ ಮಾಡುವ ಅಥವಾ 50:50 ಅನುಪಾತದಡಿ ಪಡೆಯುವ ಕುರಿತು ರೈತರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಧಿಕಾರದ ಅಧ್ಯಕ್ಷರಿಗೆ ಸೂಚನೆ ನೀಡಿದರು.
ಇತರೆ ನಿರ್ಧಾರಗಳು
- ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸಂಬಂಧಿಸಿದಂತೆ ಜಿಐಎಸ್ ಆಧಾರಿತ ಅಂತಿಮ ಮಹಾಯೋಜನೆ (ಪರಿಷ್ಕೃತ-3) 2041 ರ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಕೆ
- ಬಸಾಪುರ ರಸ್ತೆಯಿಂದ ಎಲೆಬೇತೂರು ರಸ್ತೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವುದು
ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಆಯುಕ್ತ ತಿಮ್ಮಣ್ಣ ಹುಲ್ಮನಿ, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಧೂಡಾ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು



