ಹೂವಿನಹಡಗಲಿ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಇಂದು( ಫೆ.4) ಅಪಾರ ಭಕ್ತರ ಸಮ್ಮುಖದಲ್ಲಿ ನಡೆಯಿತು.
ರಾಜ್ಯವೇ ಕಾಯುತ್ತಿದ್ದ ಈ ಬಾರಿಯ ಭವಿಷ್ಯವಾಣಿಯನ್ನು ಗೊರವಯ್ಯ ನುಡಿದ್ದಾರೆ. “ಸಂಪಾದಿತಲೇ ಪರಾಕ್” ಎಂಬ ಎರಡೇ ನುಡಿಯಲ್ಲಿ ಕಾರ್ಣಿಕ ಭವಿಷ್ಯವಾಣಿ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸ ಇಂದು ಸಂಜೆ ಡೆಂಕನಮರಡಿಯಲ್ಲಿ ಜರುಗಿತು. ಈ ಕಾರ್ಣಿಕ ಭವಿಷ್ಯವಾಣಿಗೆ ಕೋಟ್ಯಂತರ ಭಕ್ತ ಸಮೂಹ ಸಾಕ್ಷಿಯಾಯಿತು.
ಈ ಕಾರಣಿಕ ನುಡಿಯು ರಾಜ್ಯದ ಮಳೆ ,ಬೆಳೆ, ರಾಜಕೀಯ, ಅರ್ಥಿಕತೆ, ಜೀವನದ ಶೈಲಿಯ ಭವಿಷ್ಯವಾಣಿ ಭಕ್ತರ ನಂಬಿಕೆ. ಈ ಬಾರಿ ಸಂಪಾದಿತಲೇ ಪರಾಕ್ ಎಂದು ನುಡಿದಿದ್ದು, ಎಲ್ಲಾ ವರ್ಗಕ್ಕೂ ಶುಭ ಸೂಚನೆ ಸಿಕ್ಕಿದೆ. ಈ ವರ್ಷ ರೈತರ ಮಳೆ-ಬೆಳೆ ಸಂಪಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ಹಾಗೆಯೇ ರಾಜಕೀಯ, ಅರ್ತಿಕತೆಯಗೂ ಒಳ್ಳೆಯ ಬೆಳವಣಿಗೆ ಸೂಚನೆವಸಿಕ್ಕಿದೆ.
ಕಾರಣಿಕ ನುಡಿ ಭವಿಷ್ಯವಾಣಿ
ಮೈಲಾರ ಕಾರಣಿಕ ಮಹೋತ್ಸವಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ಭೂಲೋಕದಲ್ಲಿ ರಾಕ್ಷಸರ ಉಪಟಳ ಹೆಚ್ಚಾದಾಗ ಸಾಕ್ಷಾತ್ ಶಿವ ಮೈಲಾರಲಿಂಗನ ಅವತಾರವೆತ್ತಿ ಇಲ್ಲಿನ ಡೆಂಕನ ಮರಡಿಯಲ್ಲಿ ರಾಕ್ಷಸರ ಮರ್ದನ ಮಾಡಿದ್ದನೆಂಬ ಪ್ರತೀತಿ ಇದೆ. ಅದರ ವಿಜಯೋತ್ಸವದ ಸಂಕೇತವಾಗಿ ಪ್ರತೀವರ್ಷ ಕಾರಣಿಕ ಮಹೋತ್ಸವ ಆಚರಿಸಿಕೊಂಡು ಬರಲಾಗಿದೆ.
ಭಂಡಾರ ಪ್ರಿಯ
ಏಳುಕೋಟಿ ಭಕ್ತರ ಆರಾಧ್ಯ ದೈವ ಮೈಲಾರಲಿಂಗಸ್ವಾಮಿ. ತುಂಗಭದ್ರಾ ನದಿ ತೀರದ ಐತಿಹಾಸಿಕ ಸುಪ್ರಸಿದ್ಧ ಮೈಲಾರ ಸುಕ್ಷೇತ್ರ ಭಕ್ತರ ಇಷ್ಟಾರ್ಥ ದೈವ. ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯೂ ಅಪಾರ ಭಕ್ತರನ್ನು ಹೊಂದಿದ ಏಳುಕೋಟಿ ಮೈಲಾರಲಿಂಗಸ್ವಾಮಿ ಭಂಡಾರ ಪ್ರಿಯ. ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿಯೂ ಸ್ವಾಮಿಯ ಭಕ್ತರಿದ್ದಾರೆ.



