ದಾವಣಗೆರೆ: ಗುಂಪು ಘರ್ಷಣೆ, ಪೊಲೀಸ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧೂಡಾ ಮಾಜಿ ಅಧ್ಯಕ್ಷ , ಕಾಂಗ್ರೆಸ್ ಮುಂಖಡ ಹಾಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಆಪ್ತ ಅಯೂಬ್ ಪೈಲ್ವಾನ್ ಮೂವರು ಪುತ್ರರು ಸಹಿತ ಇದುವರೆಗೆ 6 ಜನ ಆರೋಪಿಗಳನ್ನು ಜಿಲ್ಲಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ಪೊಲೀಸ್ ಠಾಣೆಯಲ್ಲಿ ಒಟ್ಟು 5 ಪ್ರಕರಣ ದಾಖಲಾಗಿದೆ.
ಪೊಲೀಸರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅಯೂಬ್ ಹಸಬನ್, ಪೈಲ್ವಾನ್ ಪುತ್ರರಾದ,ಹುಸೇನ್ ಹಾಗೂ ಹಮ್ಜಾ ಬಂಧಿತರು.
ದಾವಣಗೆರೆ: ಬಾರ್ ಕಳ್ಳತನ ಮಾಡಿದ್ದ 7 ಆರೋಪಿಗಳ ಅರೆಸ್ಟ್; 3.35 ಲಕ್ಷ ಮೌಲ್ಯದ ಸ್ವತ್ತು ವಶ
ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಯೂಬ್ ಪೈಲ್ವಾನ್ ಹಿರಿಯ ಪುತ್ರ ಹಸನ್ ಪೈಲ್ವಾನ್, ಆತನ ಸ್ನೇಹಿತರಾದ ಫೈಜಾನ್, ಅಬ್ರಾರ್, ಆಯಾನ್ ನ್ನು ಇದಕ್ಕೂ ಮುನ್ನ ಪೊಲೀಸರು ಬಂಧಿಸಿದ್ದರು.
ಮಧ್ಯ ಕರ್ನಾಟಕದ ದಾವಣಗೆರೆ ಈಗ ರಿಪಬ್ಲಿಕ್ ಆಫ್ ದಾವಣಗೆರೆ; ಬಿಜೆಪಿ ಕಿಡಿ
ಆಜಾದ್ ನಗರ ಆಟೋ ನಿಲ್ದಾಣದ ಬಳಿ ಗುಂಪು ಗಲಾಟೆ, ಬಡಾವಣೆ ಠಾಣೆಯ ವ್ಯಾಪ್ತಿಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಡೆದ ಗಲಾಟೆ ನಡೆಸಿದ್ದರು. ಇದಲ್ಲದೆ, ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣದಲ್ಲಿ ಎರಡು ಪೊಲೀಸ್ ಠಾಣೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಡಿವೈಎಸ್ಪಿ ಶರಣ ಬಸವೇಶ್ವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
ದಾವಣಗೆರೆ: ಜಮೀನು ಒತ್ತುವರಿ ವಿಚಾರಕ್ಕೆ ತಮ್ಮನನ್ನೇ ಕೊಲೆಗೈದ ಅಣ್ಣ…!
ಆರೋಪಿಗಳಾದ ಹುಸೇನ್ ಪೈಲ್ವಾನ್ ಹಾಗೂ ಹಮ್ಜಾ ಅವರನ್ನು ಸೋಮವಾರ ರಾತ್ರಿ ಬಂಧಿಸಿದ ಪೊಲೀಸರು ವಿದ್ಯಾನಗರ ಠಾಣೆಗೆ ಕರೆತಂದಿದ್ದರು. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.



