ದಾವಣಗೆರೆ: ಜಮೀನು ಒತ್ತುವರಿ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ತಮ್ಮನ್ನೇ ಕೊಲೆಗೈದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಕುಸಿತ; ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ…?
ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಿ.ಕೆ ನೀಲಪ್ಪ (62) ಕೊಲೆಯಾದ ವ್ಯಕ್ತಿ. ನೀಲಪ್ಪ ಅಣ್ಣ ಸಿ.ಕೆ ಚಂದ್ರಪ್ಪ ಹತ್ಯೆ ಮಾಡಿದ ಆರೋಪಿ. ಜಮೀನು ಒತ್ತುವರಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇಬ್ಬರ ನಡುವೆ ಪರಸ್ಪರ ಮಾತಿನ ಘರ್ಷಣೆ ನಡೆದ ವಿಕೋಪಕ್ಕೆ ಹೋಗಿದೆ. ಚಂದ್ರಪ್ಪ ತಮ್ಮನ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ನೀಲಪ್ಪ ತೀವ್ರ ರಕ್ತಸ್ರಾವದಿಂದ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ದಾವಣಗೆರೆ: ಪೊಲೀಸರ ಮೇಲೆ ಹಲ್ಲೆ ನಡೆದರೂ ಸರ್ಕಾರಕ್ಕೆ ಮೌನವೇಕೆ.? ಬ್ರದರ್ಸ್’ ಎಂಬ ಕಾರಣಕ್ಕಾಗಿಯೇ…?; ಬಿಜೆಪಿ ಕಿಡಿ
ಕೊಲೆಗೆ ಚಂದ್ರಪ್ಪನ ಕುಟುಂಬದ ಸದಸ್ಯರು ಸಹಕರಿಸಿದ್ದಾರೆ. ಪ್ರಕರಣ ಎಲ್ಲರ ವಿರುದ್ಧ ದಾಖಲಿಸುವಂತೆ ನೀಲಪ್ಪ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮಾಯಕೊಂಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.



