ಡಿವಿಜಿ ಸುದ್ದಿ, ದಾವಣಗೆರೆ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಏ.1 ರಿಂದ ಭಾರತ್ ಸ್ಟೇಜ್-4 (ಬಿ.ಎಸ್-4 )ಮಾದರಿಯ ಯಾವುದೇ ವಾಹನಗಳು ಮಾರಾಟ ಅಥವಾ ನೋಂದಣಿ ಮಾಡುವಂತಿಲ್ಲ ಎಂದು ಸಾರಿಗೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಈಗಾಗಲೇ ತಾತ್ಕಾಲಿಕ ನೋಂದಣಿಯಾಗಿರುವ ಹಾಗೂ ಇನ್ನೂ ಮಾರಾಟವಾಗದೆ ಇರುವ ಬಿಎಸ್-4 ಮಾದರಿಯ ಎಲ್ಲಾ ವರ್ಗಗಳ ವಾಹನಗಳನ್ನು ಮಾ.31 ರ ಒಳಗೆ ಖಾಯಂ ನೋಂದಣಿ ಮಾಡಿಕೊಳ್ಳಬೇಕು. ಮತ್ತು ಏ.1 ರಿಂದ ಯಾವುದೇ ಬಿಎಸ್-4 ವಾಹನಗಳನ್ನು ನೋಂದಣಿ ಮಾಡಲಾಗುವುದಿಲ್ಲ ಎಂದು ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ಜೆ ಬಣಕಾರ್ ಸೂಚಿಸಿದ್ದಾರೆ.
ವಾಯ ಮಾಲಿನ್ಯ ನಿಯಂತ್ರಿಸುವ ಸಲುವಾಗಿ 2020ರ ಎಪ್ರಿಲ್ 1ರಿಂದ ದೇಶದಾದ್ಯಂತ ಭಾರತ್ ಸ್ಟೇಜ್ IV ವೆಹಿಕಲ್ನ್ನು ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಮೋಟಾರು ವಾಹನಗಳ ಮಾಲಿನ್ಯಕಾರಕಗಳನ್ನು ತಡೆಗಟ್ಟುವ ಸಲುವಾಗಿ ಭಾರತ್ ಸ್ಟೇಜ್ ಹೊರಸೂಸುವಿಕೆ ಮಾನದಂಡವನ್ನು ಸರ್ಕಾರ ರಚಿಸಿದೆ. ಎಪ್ರಿಲ್ 1ರಿಂದ ಭಾರತ್ ಸ್ಟೇಜ್ VI ಎಮಿಶನ್ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.



