ದಾವಣಗೆರೆ: ಬೇಸಿಗೆ ಹಂಗಾಮಿನ ಭತ್ತದ ಸಸಿ, ತೋಟಗಾರಿಕಾ ಬೆಳೆಗಳಿಗೆ ತುರ್ತು ನೀರಿನ ಅಗತ್ಯವುದ್ದು, ಭದ್ರಾ ಅಣೆಕಟ್ಟೆಯ ಬಲ ನಾಲೆಯಿಂದ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿದೆ.
ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಆರ್. ಲಿಂಗರಾಜ್ ಶಾಮನೂರು, ಬೇಸಿಗೆ ಹಂಗಾಮಿನ ಭತ್ತದ ಸಸಿ ಮಾಡಲು ಹಾಗೂ ತೋಟಗಾರಿಕಾ ಬೆಳೆಗಳಿಗೆ ಈಗ ತುರ್ತು ನೀರಿನ ಅಗತ್ಯವಿದೆ. ಮೂಡುಗಾಳಿ ಹೆಚ್ಚಾಗಿ ಬೀಸುತ್ತಿರುವುದರಿಂದ ಭೂಮಿ ಗಡುಸಾಗಿದ್ದು, ತೋಟಗಾರಿಕೆ ಬೆಳೆಗಳು ಒಣಗುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕೂಡಲೇ ಮಧ್ಯಪ್ರವೇಶಿಸಬೇಕು. ಕೂಡಲೇ ಭದ್ರಾ ಕಾಡಾ ಸಭೆ ಕರೆದು, ಈ ತಿಂಗಳ ಕೊನೆಯ ವಾರದಲ್ಲೇ ನಾಲೆಗಳಿಗೆ ನೀರು ಹರಿಸುವಂತೆ ರೈತ ಮುಖಂಡರಾದ ಶಾನ್ಭೋಗ ನಾಗರಾಜರಾವ್ ಕೊಂಡಜ್ಜಿ, ಎ.ಎಂ. ಮಂಜುನಾಥ್, ಮಹೇಶ್, ಹನುಮಂತಪ್ಪ, ಪುನೀತ್ ಮತ್ತು ಉಜ್ಜಣ್ಣ ಅವರು ಒತ್ತಾಯಿಸಿದ್ದಾರೆ.



