ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಶಿಕ್ಷಕರೊಬ್ಬರಿಗೆ ಆನ್ಲೈನ್ನಲ್ಲಿ ಷೇರು ಹೂಡಿಕೆ ಮಾಡಿದ್ರೆ ಅಧಿಕ ಲಾಭದ ಆಮಿಷವೊಡ್ಡಿ 11,93,896 ರೂ. ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಬಗ್ಗೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾಳಿ ಪಟ್ಟಣದ ದುರ್ಗಿಗುಡಿಯ ಶಿಕ್ಷಕರು ಷೇರು ಹೂಡಿಕೆ ಬಗ್ಗೆ ಹುಡುಕುತ್ತಿದ್ದಾಗ, ವಾಟ್ಸಾಪ್ ಗೆ ಬಂದ ಒಂದು ಲಿಂಕ್ ಕ್ಲಿಕ್ ಮಾಡಿ ತನ್ನ ವೈಯಕ್ತಿಕ ಮಾಹಿತಿ ತುಂಬಿ ಅಕೌಂಟ್ ಓಪನ್ ಮಾಡಿದ್ದಾರೆ. ಹೊಸ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದರೆ ತಿಂಗಳಿಗೆ ಶೇಕಡ 300ರಷ್ಟು ಲಾಭ ಗಳಿಸಬಹುದು ಎಂದು ನಂಬಿಸಿದ ವಂಚಕರು, ಒಟ್ಟು 11,93,896 ರೂ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ.
ಈ ಹಣ ವರ್ಗಾವಣೆ 2025ರ ಸೆಪ್ಟೆಂಬರ್ 3 ರಿಂದ 2025ರ ಅಕ್ಟೋಬರ್ 24ರವರೆಗೆ ನಡೆದಿದೆ. ಅಕ್ಟೋಬರ್ 25ರಂದು ತಮ್ಮ ಹೂಡಿಕೆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಹೊಸ ಕಂಪನಿ ಷೇರು ಬಿಡುಗಡೆ ಆಗಿಲ್ಲ ಎಂದು ಹೇಳಿದ್ದಾರೆ. ನಂತರ ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ವಂಚನೆ ನಡೆದಿರುವುದು ಶಿಕ್ಷಕನಿಗೆ ಗೊತ್ತಾಗಿದೆ.
ಶಿಕ್ಷಕರ ಖಾತೆಯಲ್ಲಿ 26,79,481 ರೂ. ಇರುವುದು ತೋರಿಸುತ್ತಿದೆ. ಆದರೆ, ಹಣ ಹಿಂಪಡೆಯಲು ಆಗದಿದ್ದಾಅಗ ಅನುಮಾನಗೊಂಡು ಅ.28ರಂದು ಆನ್ಲೈನ್ನಲ್ಲಿ ದೂರು ದಾಖಲಿಸಿದ್ದಾರೆ.



