ದಾವಣಗೆರೆ: ಸಮಾಜ ಕಲ್ಯಾಣ ಇಲಾಖೆ, ತಾಂಡ ಅಭಿವೃದ್ದಿ ನಿಗಮದ (Karnataka Tanda Development Corporation) ವತಿಯಿಂದ ಸಂತಸೇವಾ ಲಾಲ್ ಜನ್ಮಸ್ಥಳ ಭಾಯಾಗಡ್, ಸೂರಗೊಂಡನಕೊಪ್ಪ, ಬಂಜಾರ ಸಮುದಾಯದ ವಿದ್ಯಾವಂತ ಯುವಕ, ಯುವತಿಯರಿಗೆ 2 ದಿನಗಳ ಸ್ವಯಂ ಉದ್ಯೋಗ, ವೃತ್ತಿ ಮಾರ್ಗದರ್ಶನ, ಬಂಜಾರ ಸಂಸ್ಕೃತಿ ಮತ್ತು ಸಂವಿಧಾನದ ಕುರಿತು ಅರಿವು ಹಾಗೂ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ದ್ವಿತೀಯ ಪಿಯುಸಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿಯನ್ನು ಆಗಸ್ಟ್ 30 ರೊಳಗೆ http://docs.google.com/form/d/1sZ4W5UP2qo9ZUMBmrTH4cyW6kU5XuCZIG60ayS8/edit ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಕರ್ನಾಟಕ ತಾಂಡ ಅಭಿವೃದ್ದಿ ನಿಗಮ, ನಂ.337/16ಎ-16, ಗಣೇಶ್ ಲೇ ಔಟ್, 1ನೇ ಕ್ರಾಸ್, ಪಿ.ಬಿ.ರಸ್ತೆ ದಾವಣಗೆರೆ ಮೊ.ಸಂ: 9739941159 ಸಂಪರ್ಕಿಸಲು ತಿಳಿಸಿದ್ದಾರೆ.



