ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜೂನ್ 16 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಉದ್ಟಾಟನೆ ಮತ್ತು ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರೆವೇರಿಸುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ, ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ.ಎಸ್.ಪಾಟೀಲ್, ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್ ಜಮೀರ್ ಅಹಮ್ಮದ್ ಖಾನ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ.ಎಸ್.ತಂಗಡಗಿ, ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ(ಬೈರತಿ),ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಘನಉಪಸ್ಥಿತರಾಗಿರುವರು.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ, ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ, ಹರಿಹರ ಶಾಸಕ ಬಿ.ಪಿ ಹರೀಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಚಿದಾನಂದ ಎಂ.ಗೌಡ, ಡಿ.ಎಸ್ ಅರುಣ್, ಕೆ.ಎಸ್.ನವೀನ್, ಕೆ.ಅಬ್ದುಲ್ ಜಬ್ಬಾರ್, ಡಾ.ಧನಂಜಯ್ ಸರ್ಜಿ, ಡಿ.ಟಿ.ಶ್ರೀನಿವಾಸ್, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ್, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್ ಪಾಲ್ಗೊಳುವರು.
ಕಾರ್ಯಕ್ರಮಗಳ ವಿವರ
ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯುವ ಡಾ.ಶಾಮನೂರು ಶಿವಶಂಕರಪ್ಪನವರ 95ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ, ಆರ್.ಎಂ.ಸಿ ಲಿಂಕ್ ರಸ್ತೆಯಲ್ಲಿರುವ ಶ್ರೀಕಲ್ಲೇಶ್ವರ ಇಂಡಸ್ಟ್ರೀಯಲ್ ಆವರಣದಲ್ಲಿರುವ ಆಧುನಿಕ ತಂತ್ರಜ್ಞಾನದ ತೊಗರಿಬೇಳೆ ಹಾಗೂ ಕಡ್ಲೆಬೇಳೆ ಮಿಲ್ಲುಗಳ ಪ್ರಾರಂಭೋತ್ಸವ, ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಉದ್ಘಾಟನೆ, ಶಂಕುಸ್ಥಾಪನೆ ನಡೆಯುವ ಕಾಮಗಾರಿಗಳು
- ಮಹಾನಗರಪಾಲಿಕೆ (ಸ್ವಚ್ಚ ಭಾರತ್ ಮಿಷನ್ ಒಳಚರಂಡಿ ಪೌರಕಾರ್ಮಿಕರ ವಿಶ್ರಾಂತಿ ಗೃಹ ಶೌಚಾಲಯ, ಇಂದಿರಾ ಕ್ಯಾಂಟಿನ್, ಸಿ.ಸಿ.ರಸ್ತೆ, 24*7 ನೀರು ಸರಬರಾಜು) ಕಾಮಗಾರಿಗಳ ಸಂ:-8, ರೂ.54771 ಲಕ್ಷ
- ಪ್ರಧಾನ ಮಂತ್ರಿ ಅವಾಸ್ ಯೋಜನೆ,(ನಗರ ಸರ್ವರಿಗೂ ಸೂರು ಯೋಜನೆಯಡಿ ವಿವಿಧ ನಗರ, ಪಟ್ಟಣಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ನಿರ್ಮಿಸಲಾದ ಮನೆಗಳು) ಕಾ.ಸಂ:1892, ರೂ.19000 ಲಕ್ಷ
- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಾ.ಸಂ:195, ರೂ.15647.23 ಲಕ್ಷ, ಕೆಆರ್ಐಡಿಎಲ್ (ರಸ್ತೆ ಕಾಮಗಾರಿ, ಸಿ.ಸಿ ಚರಂಡಿ ನಿರ್ಮಾಣ), ಕಾ.ಸಂ:231, ರೂ.7578.05 ಲಕ್ಷ
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ(ಸಾಮಾನ್ಯ ಸೇವಾ ಕೇಂದ್ರ ಕಟ್ಟಡ, ಮೊರಾರ್ಜಿ ದೇಸಾಯಿ ವಸತಿ ಶಾಲೆ), ಕಾ.ಸಂ-4, ರೂ.3140 ಲಕ್ಷ
- ಶಾಲಾ ಶಿಕ್ಷಣ ಇಲಾಖೆ(ಶಾಲಾ ಕಟ್ಟಡಗಳ ಉದ್ಘಾಟನೆ ಮತ್ತು ಭೂಮಿ ಪೂಜೆ), ಕಾ.ಸಂ-3, ರೂ.2508 ಲಕ್ಷ
- ಸಮಾಜ ಕಲ್ಯಾಣ ಇಲಾಖೆ(ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ), ಕಾ.ಸಂ-1, ರೂ.2350 ಲಕ್ಷ, ಪದವಿಪೂರ್ವ ಶಿಕ್ಷಣ ಇಲಾಖೆ(ಪಿಆರ್ಇಡಿ) (ವಿವೇಕ ಯೋಜನೆಯಡಿ 23 ಕಾಲೇಜು ಕಟ್ಟಡ ನಿರ್ಮಾಣ), ಕಾ.ಸಂ-73, ರೂ.1724.89ಲಕ್ಷ
- ಚಿಗಟೇರಿ ಜಿಲ್ಲಾ ಆಸ್ಪತ್ರೆ(ಕ್ರಿಟಿಕಲ್ ಕೇರ್ ಕಟ್ಟಡದ ಶಂಕುಸ್ಥಾಪನೆ), ಕಾ.ಸಂ:1, ರೂ.1663 ಲಕ್ಷ
- ಜಿಲ್ಲಾ ಆಯುಷ್ ಕಚೇರಿ(ಸಂಯುಕ್ತ ಆಯುಷ್ ಆಸ್ಪತ್ರೆ ಆಯುಷ್ ಕಚೇರಿ ಆಯುರ್ವೇದ ಆಸ್ಪತ್ರೆ), ಕಾ.ಸಂ-3, ರೂ.1284.85 ಲಕ್ಷ
- ಗೃಹ ಮಂಡಳಿ(ಸಮಗ್ರ ಕೃಷಿ ಪದ್ದತಿಯ ಶ್ರೇಷ್ಠತೆಯ ಕೇಂದ್ರ ಕಟ್ಟಡ ಕೃಷಿಯಲ್ಲಿ ಬುದ್ದಿ ಮತ್ತೆ ಕೇಂದ್ರ ಮೆಟ್ರಿಕ್ ನಂತರದ ಬಾಲಕಿಯ ನಿಯಯ), ಕಾ.ಸಂ-3, ರೂ.1104.32 ಲಕ್ಷ
- ಎಪಿಎಂಸಿ(ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ ಕಾಮಗಾರಿ), ಕಾ.ಸಂ-4, ರೂ.855.19 ಲಕ್ಷ
- ಪಶು ಇಲಾಖೆಯ ಪಶು ಚಿಕಿತ್ಸಾಲಯ ಮತ್ತು ಪ್ರಾಣಿ ರೋಗ ಪ್ರಯೋಗಲಯ, ಕಾ.ಸಂ-8, ರೂ.315.76 ಲಕ್ಷ
- ಡಿಎಂಎಫ್ ಗಣಿ ಮತ್ತು ಭೂವಿಜ್ಞಾನ ಇಲಾಖೆಯ (ನಿರ್ಮಿತಿ ಕೇಂದ್ರ) (ಸಿಸಿ ರಸ್ತೆ ರಿಂಗ್ ರಸ್ತೆ ಶಾಲಾ ಕೊಠಡಿಗಳ ನಿರ್ಮಾಣ) ಕಾ.ಸಂ-4, ರೂ.294 ಲಕ್ಷ, ಜಿಲ್ಲಾ ಗ್ರಂಥಾಲಯ(ನೂತನ ಗ್ರಂಥಾಲಯ ಕಟ್ಟಡ ಶಂಕುಸ್ಥಾಪನೆ), ಕಾ.ಸಂ-2, ರೂ.60 ಲಕ್ಷ
- ಲೋಕೋಪಯೋಗಿ ಇಲಾಖೆ(ಹೊನ್ನಾಳಿ, ನ್ಯಾಮತಿಯಲ್ಲಿ ಐಬಿ ಕಟ್ಟಡ & ಮಾಯಕೊಂಡ ಕ್ಷೇತ್ರದ ರಸ್ತೆ ಕಾಮಗಾರಿ) ಕಾ.ಸಂ-40, ರೂ.16700 ಲಕ್ಷ
- ಆರೋಗ್ಯ ಇಲಾಖೆ(ಪ್ರಾಥಮಿಕ ಆರೋಗ್ಯಗಳ ಕಟ್ಟಡ), ಕಾ.ಸಂ-15, ರೂ.4030 ಲಕ್ಷ
- ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕಾ.ಸಂ-39, ರೂ.780ಲಕ್ಷ, ಜಿಲ್ಲಾ ವಿಪತ್ತು ಉಪಶಮನ ನಿಧಿ(ಮೀಟಿಗೇಶನ್ ಪಂಡ್), ಕಾ.ಸಂ-8, ರೂ.788.50ಲಕ್ಷ
- ಗ್ರಾಮೀಣ ಗ್ರಂಥಾಲಯ ಕಟ್ಟಡ, ಕಾ.ಸಂ-176, ರೂ.704 ಲಕ್ಷ, ಜಿಲ್ಲಾ ನಗರಾಭಿವೃದ್ದಿ ಕೋಶ, ಕಾ.ಸಂ-6, ರೂ.302.24ಲಕ್ಷ
- ಒಟ್ಟು ಮೊತ್ತ ರೂ.135601.03 (ಒಂದು ಸಾವಿರದ ಮೂರು ನೂರಾ ಐವತ್ತಾರು ಕೋಟಿ ಒಂದು ಲಕ್ಷದ ಮೂರು ಸಾವಿರ)