ದಾವಣಗೆರೆ: ರಾಂ ಅಂಡ್ ಕೋ ಸರ್ಕಲ್ ನ ಗೆಳೆಯರ ಬಳಗದಿಂದ ಮಾ. 14 ರಂದು ಹೋಳಿ ಹಬ್ಬ ಆಚರಣೆ ನಡೆಸಲಾಗುವುದು. ಈ ವರ್ಷ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಆಚರಣೆ ಮಾಡಲಾಗುತ್ತಿಲ್ಲ ಎಂದು ಕೆಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿಯ ಗಾಳಿ ಸುದ್ದಿಯನ್ನು ಯಾರೂ ನಂಬಬಾರದು. ಪ್ರತಿ ವರ್ಷದಂತೆಯೇ, ಈ ಬಾರಿಯೂ ರಾಂ ಅಂಡ್ ಕೋ ಸರ್ಕಲ್ ನಲ್ಲಿಯೇ ಹೋಳಿ ಹಬ್ಬನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ನಾಗೇಂದ್ರರೆಡ್ಡಿ ಹೇಳಿದರು.
ದಾವಣಗೆರೆ: ಮಾ.15 ರಂದು ಬೃಹತ್ ಉದ್ಯೋಗ ಮೇಳ; 40ಕ್ಕೂ ಹೆಚ್ಚು ಕಂಪನಿಗಳಿಂದ 3 ಸಾವಿರ ಹುದ್ದೆ ಭರ್ತಿ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 27 ವರ್ಷದಿಂದ ರಾಂ ಅಂಡ್ ಕೋ ವೃತ್ತದಲ್ಲಿ ಹೋಳಿ ಅಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಹೋಳಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು. ಶಾಸಕ ಶಾಮನೂರು ಶಿವಶಂಕರಪ್ಪ ಹೋಳಿಗೆ ಚಾಲನೆ ನೀಡುವರು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿರು ಬಿಸಿಲಿನ ನಡುವೆಯೂ ಮಳೆ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ಹಗುರ ಮಳೆ
ಮಾ.13 ರಂದು ಸಂಜೆ 7 ಕ್ಕೆ ಕಾಮದಹನಮಾಡಲಾಗುವುದು. ಮಾ. 14 ರ ಶುಕ್ರವಾರ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ ಹೋಳಿ ಆಚರಿಸಲಾಗುತ್ತದೆ. ಎರಡು ಸಾವಿರಕ್ಕೂ ಹೆಚ್ವು ಯುವಕ-ಯುವತಿಯರು ಭಾಅಗಿಯಾಗಲಿದ್ದು, ಯುವತಿಯರಿಗೆ ಪ್ರತ್ಯಕ ಸ್ಥಳಾವಕಾಶ ಮಾಡಿಕೊಡಲಾಗುವುದು.
ಒಂದು ವರ್ಷದೊಳಗೆ ಬಾಕಿ ಉಳಿದಿರುವ ಕೃಷಿ ಪಂಪ್ ಸೆಟ್ ಗಳಿಗೆ ಟಿಸಿ ಸೌಲಭ್ಯ; ಇಂಧನ ಸಚಿವ
ಬೆಳಗಾವಿಯಿಂದ ಡಿಜೆ ತರಿಸಲಾಗುವುದು. ಕಾಮದಹನ ಮಾಡುವಸಂದರ್ಭದಲ್ಲಿ ಕಾಮದಹನದ ಹಿಂದಿರುವ ಪುರಾಣ
ಕತೆಯನ್ನು ಡಿವಿಡಿ ಮೂಲಕ ಪ್ರಸಾರ ಮಾಡುವವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಿತಿಯ ಅಭಿಷೇಕ್ ಬೇತೂರು, ಬೇತೂರು ಬಸವರಾಜ್, ಅಜಿತ್
ಆಲೂರು, ಸುಭಾಶ್ಚಂದ್ರ ಇದ್ದರು.



