ದಾವಣಗೆರೆ: ಸುಜಿತ್ ಕುಮಾರ್ ಯು.ಎಲ್ 19 ವರ್ಷದ ಯುವಕ ನವಂಬರ್ 19 ರಂದು ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದು, ಇವರ ಐದು ಅಂಗಾಂಗಗಳನ್ನು ಕುಟುಂಬದವರು ಮೃತರ ಇಚ್ಚೆಯ ಪ್ರಕಾರ ದಾನ ಮಾಡಿರುತ್ತಾರೆ.
ಅಂಗಾಂಗ ದಾನ ಮಾಡಿ ಜೀವಪರ ಕಾರ್ಯವನ್ನು ಗುರುತಿಸಿ ಇವರ ಕುಟುಂಬದವರಿಗೆ ಜನವರಿ 26 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.



