ದಾವಣಗೆರೆ: ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್, ವಿರಕ್ತಮಠದ ಬಸವಪ್ರಭು ಸ್ವಾಮೀಜಿ ವಿರುದ್ಧ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.
ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಯಾವುದೋ ಎರಡು ಸ್ಕೂಲ್ ನಡೆಸುವವನು ದಾವಣಗೆರೆಗೆ ಬಂದು, ಕುಟುಂಬ ರಾಜಕಾರಣ ಬಗ್ಗೆ ಮಾತನಾಡುತ್ತಾನೆ. ಅವನಿಗೆ ಕಾವಿ ಧರಿಸಿರುವ ಸ್ವಾಮಿ ದನಿಗೂಡಿಸುತ್ತಾನೆ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.
ನಿಮಗೆ ಯಾರು ಬೇಡ ಅಂತಾರೆ, ನೀವು ಮುಂದೆ ಬಂದು ಎಲೆಕ್ಷನ್ ನಿಂತ್ಕೊಳ್ಳಿ. ಆ ಸ್ವಾಮಿ ಕಾವಿ ಕಳಚಿ, ಖಾದಿ ಧರಿಸಿ ಚುನಾವಣೆಗೆ ನಿಲ್ಲಲಿ. ಇಂತಹ ಸ್ವಾಮೀಜಿಯಿಂದ ದೇಶ ಉದ್ದಾರಗಲ್ಲ. ಒಳ್ಳೆಯ ಸ್ವಾಮೀಜಿಗಳಿದ್ದರೆ ನಮಸ್ಕಾರಿಸಬಹುದು ಈಗ ಸ್ವಾಮೀಜಿ ಬಗ್ಗೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.



