ನಕಲಿ ದಾಖಲೆ ಸೃಷ್ಟಿಸಿ ದಾವಣಗೆರೆಯಲ್ಲಿ ಅಕ್ರಮ ವಾಸ; ಆರೋಪಿಗೆ 1 ವರ್ಷ ಜೈಲು, 1.50 ಲಕ್ಷ ದಂಡ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: ನಕಲಿ ಪ್ರಮಾಣಪತ್ರ ಸೃಷ್ಟಿಸಿ ಸರಿಯಾದ ವೀಸಾ ಹೊಂದದೆ ದಾವಣಗೆರೆಯಲ್ಲಿ ವಾಸುತ್ತಿದ್ದ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 1.50 ಲಕ್ಷ ದಂಡ ನಿಧಿಸಲಾಗಿದೆ.

ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ
ರಮೇಶ್‌ರಾವ್ ಎಂ.ಎಸ್ 2012 ರಲ್ಲಿ ದೂರು ನೀಡಿದ್ದರು. ಆರೋಪಿ ದಾವಣಗೆರೆಯ ಭಗತ್‌ಸಿಂಗ್‌ ನಗರದಲ್ಲಿ ನೆಲೆಸಿರುವ ವಿಜಯಕುಮಾರ್ ಮೂಲತಃ ಮಲೇಶಿಯಾ ದೇಶದ ಕೌಲಲಾಂಪುರ್ ನಿವಾಸಿಯಾಗಿದ್ದು, 16/08/1985 ರಂದು ಮೊದಲನೆ ಎಂಬಿಬಿಎಸ್ ಗೆ ದಾವಣಗೆರೆಯ ಜೆ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ದಾಖಲಾಗಿದ್ದರು. ದಿನಾಂಕ:04/02/1995 ರಂದು ಭಾರತೀಯ ಪ್ರಜೆಯಾದ ತ್ರೀವೇಣಿ ಶಾನಭಾಗ್ ರಿಜಿಸ್ಟರ್‌‌ಮದುವೆಯಾದ ಈತನು, ಎಂ.ಬಿ.ಬಿ.ಎಸ್ ಪದವಿಯಲ್ಲಿ ಅನುತ್ತೀರ್ಣನಾಗಿದ್ದರು ಸಹ ತಾನು ಎಂ.ಡಿ ವ್ಯಾಸಂಗ ಮಾಡುತ್ತಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು. ಇದಲ್ಲದೆ ಕಾಲೇಜಿನಿಂದ ಬೋನಫೈಡ್ ಪ್ರಮಾಣ
ಪತ್ರಗಳು ನಕಲಿ ಪ್ರಮಾಣ ಪತ್ರಗಳಾಗಿದ್ದು ಹಾಗೂ ಅದರಲ್ಲಿನ(ಪ್ರಾಂಶುಪಾಲರ ಸಹಿ) ಪೊರ್ಜರಿಯಾಗಿ ಅತನೆ ಸಹಿ ಮಾಡಿದ್ದು ಹಾಗೂ ತನ್ನ ವಾಸ ಮುಂದುವರೆಸುವ ಸಲುವಾಗಿ ಎಕ್ಸ್ ವೀಸಾವನ್ನು ಪಡೆದಿರಲಿಲ್ಲ. ಸಸರಿಯಾದ ವೀಸಾವನ್ನು ಹೊಂದದೆ ಭಾರತದಲ್ಲಿ ವಾಸವಾಗಿದ್ದಾರೆ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಕೆಟಿಜೆ ನಗರ ಪೊಲಿಸ್ ಠಾಣೆಯಲ್ಲಿ 2012 ಪ್ರಕರಣ ದಾಖಲಿಸಿದ್ದರು.

ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಶಿವಪ್ರಸಾದ್ .ಎಂ ಆರೋಪಿ ಕೆ. ವಿಜಯಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿದ್ದರಿಂದ ದಿನಾಂಕ:26-10-2024 ರಂದು ಆರೋಪಿತನಿಗೆ 1 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದು, ಸದರಿ ಆರೋಪಿತನು ಈಗಾಗಲೇ 1 ವರ್ಷ ನ್ಯಾಯಾಂಗ ಬಂಧನದಲ್ಲಿದ್ದುದ್ದರಿಂದ ಸದರಿ ಬಂಧನದ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್
ಮಾಡಲಾಗಿರುತ್ತದೆ. ಇದಲ್ಲದೆ 1,50,000/- ರೂ ದಂಡ ವಿಧಿಸಿ ತೀರ್ಪು ನೀಡಿರುತ್ತದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *