ದಾವಣಗೆರೆ: ಟ್ರಾನ್ಸಫಾರ್ಮರ್ ( ಟಿಸಿ) ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ನಿಂದ ಲೈನ್ಮ್ಯಾನ್ ಮೃತಪಟ್ಟ ದುರ್ಘಟನೆ ಮಾಯಕೊಂಡ ಹೋಬಳಿಯ ಮಳಲಕೆರೆ ಗ್ರಾಮದಲ್ಲಿ ನಡೆದಿದೆ.
ಲೈನ್ ಮ್ಯಾನ್ ಮುತ್ತು(32) ಮೃತ ದುರ್ದೈವಿ. ಗ್ರಾಪಂ ಮುಂಭಾಗದ ಟಿಸಿ ಕಟ್ಟು ಹೋಗಿತ್ತು. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಿ ತೊಂದರೆ ಅನುಭವಿಸಿದ್ದರು. ಈ ಹಿನ್ನೆಲೆ ಕೆಇಬಿಗಳಿಗೆ ತಿಳಿಸಿದ್ದ ಗ್ರಾಮಸ್ಥರು. ಕೆಇಬಿಯಿಂದ ಟಿಸಿ ದುರಸ್ತಿಗೆ ಬಂದಿದ್ದ ಲೈನ್ಮ್ಯಾನ್ ಮುತ್ತು ಬಂದಿದ್ದನು. ಟ್ರಾನ್ಸ್ಫಾರಂ ಮೇಲೆ ಏರಿ ರಿಪೇರಿ ಮಾಡುವ ವೇಳೆ ಹೈವೋಲ್ಟೇಜ್ ವಿದ್ಯುತ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಟ್ರಾನ್ಸ್ಪಾರಂ ರಿಪೇರಿ ಮಾಡುವಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಿತ್ತು. ಅದರೆ, ಬಗ್ಗೆ ಮೊದಲೇ ಮುಂಜಾಗ್ರತಾ ಕ್ರಮ ವಹಿಸದ ಕಾರಣ ಮತ್ತು ಲೈನ್ಮ್ಯಾನ್ಗೆ ಕೈಗವಸು, ಶೂ, ಇತರೆ ಜೀವ ರಕ್ಷಕ ಹಾಕಿರಲಿಲ್ಲ. ಲೈನ್ ಮ್ಯಾನ್ ಸಾವಿಗೆ ಕೆಇಬಿ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.