ದಾವಣಗೆರೆ: ವಿಚ್ಛೇದನ ಕೋರಿದ್ದ ಜಿಲ್ಲೆಯ 25 ದಂಪತಿಗಳು ಸೆ.14ರಂದು ನಡೆದ ಮೂರನೇ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಂದಾಗಿದ್ದಾರೆ.
ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿನ 17 ಜೋಡಿಗಳು ಹಾಗೂ ಜಗಳೂರು ಹಾಗೂ ಚನ್ನಗಿರಿ ನ್ಯಾಯಾಲಯದಲ್ಲಿ ತಲಾ ಎರಡು ಜೋಡಿಗಳು, ಹರಿಹರ ನ್ಯಾಯಾಲಯದಲ್ಲಿ ಮೂರು ಜೋಡಿಗಳು ಮತ್ತು ಹೊನ್ನಾಳಿ ನ್ಯಾಯಾಲಯದಲ್ಲಿ ಒಂದು ಜೋಡಿ ಮತ್ತೆ ಒಂದಾಗಿ ಜೀವನ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ. ನಗರದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಒಂದಾದ ಜೋಡಿಗಳಿಗೆ ಪರಸ್ಪರ ಹಾರ ಹಾಕಿಸಿ, ಸಿಹಿ ತಿನಿಸಲಾಯಿತು. ನ್ಯಾಯಾಧೀಶರು, ನ್ಯಾಯವಾದಿಗಳು ಜೋಡಿಗಳಿಗೆ ಶುಭ ಕೋರಿದರು.



