ದಾವಣಗೆರೆ: ಅಕ್ರಮವಾಗಿ ಗಾಂಜಾ ಗಿಡ ಬೆಳೆದ ಆರೋಪಿಗೆ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ 02 ವರ್ಷ ಕಾರಗೃಹ ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ.
ಸಂತೆಬೆನ್ನೂರು ಪೊಲೀಸ್ ಠಾಣೆಯ ಗೆದ್ದಲಹಟ್ಟಿ ಗ್ರಾಮದ ಶ್ರೀ.ಚೌಡೇಶ್ವರಿ ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಬೆಳಸಿರುತ್ತಾರೆಂದು ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿಸಿಬ್ಬಂದಿ ಹಾಗೂ ಪಂಚರುಗಳೊಂದಿಗೆ ಸ್ಥಳಕ್ಕೆ ದಾಳಿ ಮಾಡಿ ಆರೋಪಿಯನ್ನು ಮಾಲು ಸಮೇತ ಹಿಡಿದಿದ್ದರು.
ಠಾಣೆಗೆ ನೀಡಿದ ವರದಿ ಮೇರೆಗೆ ಸಂತೆಬೆನ್ನೂರು ಪೊಲೀಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ತನಿಖಾಧಿಕಾರಿ ಎಎಸ್ಐ ಹೆಚ್. ರಾಜಪ್ಪ ಆರೋಪಿತನ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಈ ಸಂಬಂಧ ಘನ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಲಯ, ದಾವಣಗೆರೆ ನ್ಯಾಯಾಲಯದಲ್ಲಿ ಸ್ಪೇಷಲ್ಸಿ ಎನ್ಡಿಪಿಎಸ್ ಅಡಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಾಜೇಶ್ವರಿ .ಎನ್ ಹೆಗ್ಡೆ, ಆರೋಪಿ ಮಹೇಶ @ ತಿರುಕಪ್ಪರ ಮಹೇಶ(40) ಗೆದ್ದಲಹಟ್ಟಿ ಗ್ರಾಮ, ಚನ್ನಗಿರಿ ತಾ,ದಾವಣಗೆರೆ ಜಿಲ್ಲೆ, ಈತನ ಮೇಲೆ ಆರೋಪ ಸಾಬೀತಾಗಿದೆ.
ದಿನಾಂಕ:-25-07-2024 ರಂದು ಆರೋಪಿತನಿಗೆ 02 ವರ್ಷ ಕಾರಾಗೃಹ ಶಿಕ್ಷೆ ಹಾಗೂ 20,000/- ರೂ ದಂಡ ವಿಧಿಸಿರುತ್ತದೆ. ಪ್ರಕರಣದಲ್ಲಿ ಆರೋಪಿ ಪರವಾಗಿ ಸರ್ಕಾರಿ ವಕೀಲ ಮಂಜುನಾಥ .ಬಿ ನ್ಯಾಯ ಮಂಡನೆ ಮಾಡಿದ್ದರು.



