Connect with us

Dvgsuddi Kannada | online news portal | Kannada news online

ದಾವಣಗೆರೆ: ಎರಡು ಕಂತುಗಳಲ್ಲಿ ಬರ ಪರಿಹಾರ ಬಿಡುಗಡೆ; 60.23 ಕೋಟಿ ಹಣ ರೈತರಿಗೆ ಪಾವತಿ; ಹಣ ಜಮೆಯಾಗದ ರೈತರು ಈ ನಂಬರ್ ಗೆ ಸಂಪರ್ಕಿಸಿ….

ದಾವಣಗೆರೆ

ದಾವಣಗೆರೆ: ಎರಡು ಕಂತುಗಳಲ್ಲಿ ಬರ ಪರಿಹಾರ ಬಿಡುಗಡೆ; 60.23 ಕೋಟಿ ಹಣ ರೈತರಿಗೆ ಪಾವತಿ; ಹಣ ಜಮೆಯಾಗದ ರೈತರು ಈ ನಂಬರ್ ಗೆ ಸಂಪರ್ಕಿಸಿ….

ದಾವಣಗೆರೆ: 2023ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ 82,928 ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ ರೂ.2000 ವರೆಗೆ ಹಾಗೂ ಬಾಕಿ ಇದ್ದ ರೈತರಿಗೆ ಒಟ್ಟು ರೂ.60,23,46,380 ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ ತಿಳಿಸಿದ್ದಾರೆ.

2023 ರ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್‍ಡಿಆರ್ ಎಫ್ ಹಾಗೂ ಎನ್‍ಡಿಆರ್‍ಎಫ್ ಮಾರ್ಗಸೂಚಿನ್ವಯ ಅರ್ಹರ ರೈತರಿಗೆ ಗರಿಷ್ಠ ರೂ.2000 ವರೆಗೆ 82928 ರೈತರಿಗೆ ರೂ.15,88,15,380 ಗಳನ್ನು ಮೊದಲ ಕಂತಾಗಿ ಪಾವತಿಸಲಾಗಿತ್ತು.

ಮೇ.2 ರ ಸರ್ಕಾರದ ಆದೇಶದಂತೆ ಮಾರ್ಗಸೂಚಿನ್ವಯ ಪರಿಹಾರ ನೀಡಲು ಬಾಕಿ ಇದ್ದ ಮೊತ್ತವನ್ನು ಈಗ ಜಿಲ್ಲೆಯ 69,575 ರೈತರಿಗೆ ರೂ.44,35,31,000 ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ ರೂ.60,23,46,381 ಗಳನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿರುತ್ತದೆ.

  • ತಾಲ್ಲೂಕುವಾರು ವಿವರ
  • ಚನ್ನಗಿರಿ ತಾಲ್ಲೂಕಿನ 16398 ರೈತರಿಗೆ ರೂ.3,07,12,576
  • ದಾವಣಗೆರೆ 17015 ರೈತರಿಗೆ ರೂ.3,22,94,548
  • ಹೊನ್ನಾಳಿ 8795 ರೈತರಿಗೆ ರೂ.1,66,55,292
  • ಜಗಳೂರು 27263 ರೈತರಿಗೆ ರೂ.5,36,64,034
  • ನ್ಯಾಮತಿ 9189 ರೈತರಿಗೆ ರೂ.1,74,61,001
  • ಹರಿಹರ ತಾಲ್ಲೂಕಿನ 4268 ರೈತರಿಗೆ ರೂ.80,27,929

ಬಾಕಿ ಇದ್ದ ಬೆಳೆ ಪರಿಹಾರ ಪಾವತಿ: ಜಿಲ್ಲೆಯಲ್ಲಿ ಬೆಳೆ ನಷ್ಟವಾದ ರೈತರಿಗೆ ಮೊದಲ ಕಂತಿನಲ್ಲಿ ಈಗಾಗಲೇ ಗರಿಷ್ಠ ರೂ.2000 ವರೆಗೆ ಪಾವತಿಸಲಾಗಿದ್ದು, ಬಾಕಿ ಪಾವತಿಸಬೇಕಾದ 69575 ರೈತರಿಗೆ ರೂ.44,35,37,000 ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಈಗ ಪಾವತಿಸಲಾಗಿದೆ. ತಾಲ್ಲೂಕುವಾರು ವಿವರದನ್ವಯ: ಚನ್ನಗಿರಿ 12758 ರೈತರಿಗೆ ರೂ.6,50,30,311, ದಾವಣಗೆರೆ 13914 ರೈತರಿಗೆ ರೂ.8,34,19,466, ಹೊನ್ನಾಳಿ 7177 ರೈತರಿಗೆ ರೂ.3,87,43,550, ಜಗಳೂರು 24493 ರೈತರಿಗೆ ರೂ. 19,29,18,592, ನ್ಯಾಮತಿಯ 8025 ರೈತರಿಗೆ ರೂ.4,58,94,470, ಹಾಗೂ ಹರಿಹರ ತಾಲೂಕಿನ 3208 ರೈತರಿಗೆ ರೂ.1,75,24,611 ಗಳನ್ನು ಈಗ ಪಾವತಿಸಿದೆ.

ಯಾವುದೇ ರೈತರಿಗೆ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಮತ್ತು ಮಾರ್ಗಸೂಚಿ ಬಗ್ಗೆ ವಿವರ ನೀಡಲು ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆ ಮಾಡಬಹುದಾಗಿದೆ.
ಸಹಾಯವಾಣಿ ಸಂಖ್ಯೆಗಳು: ಚನ್ನಗಿರಿ.ತಾ. ಮೊ.ಸಂ:7892481962, ದಾವಣಗೆರೆ, ಮೊ.ಸಂ:9731254380, ಹೊನ್ನಾಳಿ.ತಾ. ಮೊ.ಸಂ:9686136015, ಜಗಳೂರ.ತಾ. ಮೊ.ಸಂ:8431977870, ನ್ಯಾಮತಿ.ತಾ. ಮೊ.ಸಂ:8073951245, ಹರಿಹರ.ತಾ.ಮೊ.ಸಂ:8618868370 ಸಂಪರ್ಕಿಸಬಹುದು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top