ದಾವಣಗೆರೆ: ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ ಮುಂದಿನ ಮೂರು ಗಂಟೆಗಳಲ್ಲಿ ದಾವಣಗೆರೆ ಸೇರಿದಂತೆ ಗದಗ, ಕೊಪ್ಪಳದ ಕೆಲವೆಡೆ ಹಾಗೂ ಬಳ್ಳಾರಿಯಲ್ಲಿ ಮೇಲ್ಮೈ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಮೂನ್ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಬಿಸಿಲಿನ ಧಗೆ, ನೀರಿನ ಅಭಾವ, ಬಾಡುತ್ತಿರುವ ಅಡಿಕೆ ತೋಟ, ಮುಗಿಲು ನೋಡುತ್ತಿದ್ದ ನೇಗಿಲ ಯೋಗಿಗೆ ಇಂದು ಸಂಜೆ ವರುಣರಾಯ ತಂಪೆರೆದಿದ್ದಾನೆ. ಈ ಮಳೆ ಎಲ್ಲರಲ್ಲಿ ಆನಂದ ಬಾಷ್ಪ ತರುವ ಮೂಲಕ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇನ್ನಷ್ಟು ಸಂತೋಷ ತರುವ ನಿಟ್ಟಿನಲ್ಲಿ ಹವಾಮಾನ ಇಲಾಖೆ ಭಾರಿ ಮಳೆ ಮುನ್ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.



