ದಾವಣಗೆರೆ: ರಾತ್ರಿ ವೇಳೆ ಮನೆ, ಮೋಟಾರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 1,91,000 ರೂ ಬೆಲೆಯ 28.13 ಗ್ರಾಂ ತೂಕದ ಚಿನ್ನ, ಒಂದು ಹಿತ್ತಾಳೆ ಕೊಳಗ, 40,000 ರೂ. ಬೆಲೆಯ ನೀರೆತ್ತುವ ಮೋಟಾರ್ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.
ಬಿ.ಕಲಪನ ಹಳ್ಳಿ ಗ್ರಾಮ ಇಷ್ಠಲಿಂಗಯ್ಯ ಎಂಬುವವರು ಠಾಣೆಗೆ ಹಾಜರಾಗಿ ಯಾರೋ ಕಳ್ಳರು, ಮನೆಯ ಹಿಂದಿನಿಂದ ಮೇಲೆ ಹತ್ತಿ ಅಟ್ಟದಿಂದ ಕೆಳಗೆ ಇಳಿದು ಮನೆಯ ಗಾಡ್ರೇಜ್ನಲ್ಲಿದ್ದ 1 ಲಕ್ಷ ನಗದು ಹಣ ಹಾಗೂ ದೇವರ ಮನೆ ಒಳಗೆ ಇದ್ದ 2 ಹುಂಡಿ ಡಬ್ಬಿಗಳಲ್ಲಿದ್ದ 5 ಸಾವಿರ ಚಿಲ್ಲರೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಕೃತ್ಯವೆಸಗಿದ್ದ ಆರೋಪಿ ಸಾದಿಕ್ (19) ಮುದ್ದಾಭೋವಿ ಕಾಲೋನಿ, ದಾವಣಗೆರೆ. ಈತನನ್ನು ಪತ್ತೆ ಮಾಡಿ ಬಂಧನ ಮಾಡಿದ್ದು, ಇತರೆ ಆರೋಪಿಗಲಾದ ಸಮಿಉಲ್ಲಾ , ಗೌಸ್ ಪೀರ್ ಅಣ್ಣಾನಗರ, ದಾವಣಗೆರೆ. ಇವರೊಂದಿಗೆ ಸೇರಿಕೊಂಡು ಕೃತ್ಯವೆಸಗಿದ್ದನು. ಆರೋಪಿತರಿಂದ 1,91,000 ರೂ ಬೆಲೆಯ 28.13 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಒಂದು ಹಿತ್ತಾಳೆ ಕೊಳಗ, 40,000 ರೂ. ಬೆಲೆ ಬಾಳುವ ಒಂದು ನೀರೆತ್ತುವ ಮೋಟಾರ್ ಹಾಗೂ ಕೃತ್ಯಕ್ಕೆ ಬಳಸಿದ್ದು 60,000 ರೂ ಬೆಲೆಯ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿತರಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 03 ಪ್ರಕರಣಗಳು ಹಾಗೂ ದಾವಣಗೆರೆ ಬಸವನಗರ ಪೊಲೀಸ್ ಠಾಣೆಯ 2 ಪ್ರಕರಣಗಳ ಪತ್ತೆಯಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆರೋಪಿತನನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳುವುದು ಬಾಕಿ ಇದ್ದು, ಕೃತ್ಯವೆಸಗಿದ್ದ ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಆರೋಪಿತರನ್ನು ಪತ್ತೆ ಮಾಡುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಎಂ ಸಂತೋಷ ಹಾಗೂ ಪ್ರಶಾಂತ್ ಸಿದ್ದನಗೌಡರ್, ಪೊಲೀಸ್ ಉಪಾಧೀಕ್ಷಕರ ದಾವಣಗೆರೆ ಗ್ರಾಮಾಂತರ ಉಪವಿಭಾಗ ಮಾರ್ಗದರ್ಶನದಲ್ಲಿ ಆರೋಪಿತರನ್ನು ಪತ್ತೆ ಕಾರ್ಯ ನಡೆದಿದೆ. ತಂಡದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್, ಪಿಎಸ್ ಐ ಬಿ. ಇಸ್ಮಾಯಿಲ್, ಮಂಜುನಾಥ ಕಲ್ಲೇದೇವರ, ಜಿಲ್ಲಾ ಪೊಲೀಸ್ ಕಚೇರಿ ಹಾಗೂ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಜೋವಿತ್ ರಾಜ್ ಮತ್ತು ಸಿಬ್ಬಂದಿ ದೇವೆಂದ್ರ ನಾಯ್ಕ್, ಅಣ್ಣಯ್ಯ, ಮಹಮ್ಮದ್ ಯುಸುಫ್, ವೀರೇಶ್, ಎಸ್ ಎಂ ಅಕ್ತರ್ ಇದ್ದರು. ಈ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



