ದಾವಣಗೆರೆ: ನಗರದಲ್ಲಿ ವಿವಿಧ ಕಡೆ ಕಳ್ಳತನವಾಗಿದ್ದ ಸುಮಾರು 1,25,000/- ರೂ. ಮೌಲ್ಯದ 4 ಬೈಕ್ ಗಳನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
ಕಿಶನ್ ಕುಮಾರ್ ಎಂಬುವವರು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಹೊಂಡಾ ಆಕ್ಟೀವಾ ಬೈಕ್ ಕಳ್ಳತನವಾದ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲು ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ ಸಂತೋಷ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್ ಗುರುಬಸವರಾಜ ನೇತೃತ್ವದಲ್ಲಿ ಜಿ. ನಾಗರಾಜ ಪಿಎಸ್ಐ , ಸಿಬ್ಬಂದಿಗಳಾದ ಫಕೃದ್ದೀನ್ ಅಲಿ, ಪೂರ್ವಾಚಾರಿ, ಸುರೇಶ್ ಟಿ, ವಿಶಾಲಾಕ್ಷಿ, ಅವರನ್ನೊಳಗೊಂಡ ತಂಡ ರಚನೆ ಮಾಡಿತ್ತು.
ಭಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಆರೋಪಿತ ಅಭಿಷೇಕ್ (20) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಜೊತೆ ಸೇರಿಕೊಂಡು ಬಸವನಗರ ಪೊಲೀಸ್ ಠಾಣೆಯ 03 ಹಾಗೂ ಗಾಂಧಿನಗರ ಠಾಣೆಯ 01 ಪ್ರಕರಣದ ಒಟ್ಟು 04 ಪ್ರಕರಣಗಳಿಗೆ ಸಂಬಂದಿಸಿದ 1,25,000/- ರೂ ಬೆಲೆ ಬಾಳುವ 04 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ ಪ್ರಸಂಶೆ ವ್ಯಕ್ತ ಪಡಿಸಿದ್ದಾರೆ.



