ದಾವಣಗೆರೆ: ಪಾಠ ಮಾಡುವಾಗ ರಾಷ್ಟ್ರ ನಾಯಕರ ಬಗ್ಗೆ ಅವಹೇಳನ ಆರೋಪದ ಮೇಲೆ ಸರ್ಕಾರಿ ಕಾಲೇಜು ಉಪನ್ಯಾಸಕನ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ. ಈ ಘಟನೆ ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪಿಯು ಕಾಲೇಜಿನ ನಡೆದಿದೆ. ಉಪನ್ಯಾಸಕ ಮಲ್ಲಿಕಾರ್ಜುನ ಎಂ. ಬಿ. ವಿರುದ್ಧ ವಿದ್ಯಾರ್ಥಿಗಳ ಪೋಷಕರು ದೂರು ದಾಖಲಿಸಿದ್ದಾರೆ.
ವೋಟರ್ ಎಂಬ ಪಾಠ ಮಾಡುವಾಗ ಸಂವಿಧಾನ, ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ನಿಂದನೆ ಮಾಡಿದ್ದಾರೆಂದು ಪೋಷಕರಿಗೆ ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಹಿನ್ನಲೆ ವಿದ್ಯಾರ್ಥಿ ಪೋಷಕ ಬಿ.ಸೌಖತ್ ಅಲಿ ಎಂಬುವವರು ದೂರು ನೀಡಿದ್ದಾರೆ. ಕೋಮು ಭಾವನೆ ಕೇರಳಿಸುವ ಉಪನ್ಯಾಸಕನ ವಿರುದ್ಧಎಫ್ ಐ ಆರ್ ದಾಖಲು ಮಾಡಲಾಗಿದ್ದು, ಮಲೇಬೆನ್ನೂರು ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



