ದಾವಣಗೆರೆ; ವಿನೋಬನಗರ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿರುವ 31ನೇ ವರ್ಷದ ಗಣೇಶ ಮೂರ್ತಿಯನ್ನು ನಾಳೆ (ಸೆ.26) ಬೃಹತ್ ಮೆರವಣಿಗೆ ಮೂಲಕ ವಿಸರ್ಜಿಸಲಾಗುವುದು ಎಂದು ಸಮಿತಿ ಕಾರ್ಯದರ್ಶಿ ಡಿ.ಕೆ. ರಮೇಶ್ ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು,ನಾಳೇ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ವಿನಾಯಕ ಮೂರ್ತಿಯನ್ನು ಪಿ.ಬಿ. ರಸ್ತೆ, ಅರುಣ ಸರ್ಕಲ್, ರಾಂ ಅಂಡ್ ಕೋಂ ಸರ್ಕಲ್, ಮುಖಾಂತರ 1 ನೇ ಮೇನ್ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ, ದೇವಸ್ಥಾನದ ಮೂಲಕವಾಗಿ ಪಿ.ಬಿ. ರಸ್ತೆಯ ಮುಖಾಂತರ ಬಾತಿಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದರು.
ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದು, ಮೆರವಣಿಗೆ ವೇಳೆ ಮಸೀದಿ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಗಣೇಶ್ ಮೂರ್ತಿಗೆ ಪುಷ್ಪ ಮಾಲೆ ಸಲ್ಲಿಸುವರು ಎಂದು ತಿಳಿಸಿದರು. ಮೆರವಣಿಗೆಯಲ್ಲಿ ನಾಸಿಕ್ ಡೋಲು, ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ, ಸಮಾಳ ಸೇರಿದಂತೆ ವಿವಿಧ ಕಲಾತಂಡಗಳು, 2 ಡಿಜೆ ಗಳು ಪಾಲ್ಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ದೇವರಮನಿ ಶಿವರಾಜ್, ಅಧ್ಯಕ್ಷ ಗುರುನಾಥ್ ಬಾಬು, ಉಪಾಧ್ಯಕ್ಷ ನಾಗರಾಜ ಗೌಡ, ಸಹ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.
ದಾವಣಗೆರೆ: ಹೊಸ ರಾಶಿ ಅಡಿಕೆ ದರ 46 ಸಾವಿರಕ್ಕೆ ಕುಸಿತ; ಹಳೆಯ ಅಡಿಕೆ ಬೆಲೆಯಲ್ಲಿಯೂ ಇಳಿಕೆ..!



