ದಾವಣಗೆರೆ; ಆಸ್ತಿ ವಿಚಾರವಾಗಿ ಅಕ್ಕ- ತಮ್ಮ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ 68 ವರ್ಷದ ಸ್ವಂತ ಅಕ್ಕನನ್ನೇ ತಮ್ಮ ಕೊಂದ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗೊಳೆದಳ್ಳಿ ಗ್ರಾಮದಲ್ಲಿ ನಡೆದಿದೆ. ಅಕ್ಕಮಹಾದೇವಿ (68) ಮೃತ ದುರ್ದೈವಿಯಾಗಿದ್ದಾರೆ. ಸ್ವಂತ ತಮ್ಮ ಪ್ರಭಾಕರ್ ( 65) ದೊಣ್ಣೆಯಿಂದ ತಲೆಗೆ ಹೊಡೆದು ಕೊಂದು ಹಾಕಿದ್ದಾನೆ. ಕಳೆದ 15 ವರ್ಷದಿಂದ ಆಸ್ತಿ ವಿಚಾರಣೆ ಕೋರ್ಟ್ ನಲ್ಲಿತ್ತು. ಕೋರ್ಟ್ ಆದೇಶದ ಮೇರೆ ಸರ್ವೇ ಮಾಡಲು ಅಧಿಕಾರಿಗಳು ಜಮೀನಿಗೆ ಬಂದಾಗ ಈ ಘಟನೆ ನಡೆದಿದೆ. ಅಕ್ಕ- ತಮ್ಮನ ನಡುವೆ ನಡೆದ ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.



