ಕೂಡ್ಲಿಗಿ; ಬಿಸಿಲಿನ ತಾಪಮಾನಕ್ಕೆ ಬಳಲಿದಂತೆ ಕಂಡು ಬಂದ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿನ ಡೋರ್ ನಿಂದ ಕುಸಿದು ಬಿದ್ದ ಘಟನೆ ನಡೆದಿದೆ. ಕೂಡ್ಲಿಗಿ ಹೆಲಿಪ್ಯಾಡ್ ನಲ್ಲಿ ಇಳಿದು ಕಾರು ಹತ್ತಿದ ನಂತರ ಕಾರಿನ ಮೇಲಿಂದ ಜನರತ್ತ ಕೈ ಬೀಸುವಾಗ ಈ ಘಟನೆ ನಡೆದಿದೆ. ಅಲ್ಲೇ ಇದ್ದ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಕಾರಿನ ಒಳಗೆ ಕುರಿಸಿ ನೀರು ನೀಡಿದ್ದಾರೆ. ನಂತರ ವೈದ್ಯರು ತಾಪಸಣೆ ನಡೆಸಿದ್ದು, ಸೂಕ್ತ ಚಿಕಿತ್ಸೆ ಪಡೆದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.



