ದಾವಣಗೆರೆ; ದಾವಣಗೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಮಹಾರಾಷ್ಟ್ರದಲ್ಲಿ ಐವರು ಅಂತರ್ ರಾಜ್ಯ ಟೈರ್ ಕಳ್ಳರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 30 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
22 ಟೈರುಗಳ ಅಂದಾಜು ಮೌಲ್ಯ ಬೆಲೆ 8.20 ಲಕ್ಷ ರೂಗಳು ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಸುಮಾರು 22 ಲಕ್ಷ ರೂ. ಬೆಲೆ ಬಾಳುವ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಮಾಲಿನ ಒಟ್ಟು ಅಂದಾಜು ಮೌಲ್ಯ 30,20,000/- ರೂ ಗಳು ಆಗಿರುತ್ತದೆ.
ದಿನಾಂಕ:27-01-2023 ರಂದು ದಾವಣಗೆರೆಯ ಎ.ಎಂ.ಎಲ್. ಮೋಟಾರ್ ಪೈ, ಲಿಮಿಟೆಡ್, ಮ್ಯಾನೇಜರ್ ಶಂಕ್ರಪ್ಪ ಕೆ.ಎಸ್ ಅವರು ತಮ್ಮ ಕಂಪನಿಯ ವರ್ಕ ಶಾಪ್ ನಲ್ಲಿ 12 ಲಾರಿಯ ಟೈರುಗಳು (ಡಿಸ್ಕ್ ಸಮೇತ) ಅಂದಾಜು ಬೆಲೆ 3,60,000/- ರೂ. 2) ಎರಡು ಲಾರಿಯ ಬ್ಯಾಟರಿಗಳು ಅಂದಾಜು ಬೆಲೆ 25,000/- ರೂ. ಕಳ್ಳತನವಾದ ಒಟ್ಟು ಮೌಲ್ಯ 3,85,000/- ರೂ. ಮೌಲ್ಯದ ಮಾಲುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು, ಪತ್ತೆ ಮಾಡುವಂತೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ
ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು, ಕಳ್ಳತನವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸವಾಲ್ ಮತ್ತು ಪಿಐ ಲಿಂಗನಗೌಡ ನೇಗಳೂರು ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹಾರೂನ್ ಅರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್ ತಂಡ ಪ್ರಕರಣದ ಆರೋಪಿತರಾದ ಮಹಾರಾಷ್ಟ್ರ ರಾಜ್ಯದ ಓಸ್ಮಾನಾಬಾದ್ ಜಿಲ್ಲೆಯ, ವಾಶಿ ತಾಲೂಕಿನ 1) ಪ್ರಕಾಶ್ ನಾನಾ ಶಿಂಧೆ, 2) ಅನಿಲ್ ಬಬನ್ ಶಿಂಧೆ, 3) ದತ್ತಾ ಗೋವರ್ಧನ್
ಶಿಂಧೆ, 4) ಸಂತೋಷ್ ಹಿಮ್ಮತ್ ಕಾಳೆ, 5) ಉಮೇಶ್ ದಿಗಂಬರ್ ಲಾಖೆ ಬಂಧಿಸಿಲಾಗಿದೆ.
ಆರೋಪಿತರಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 03 ಪ್ರಕರಣಗಳಲ್ಲಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ 02 ಪ್ರಕರಣಗಳಲ್ಲಿ ಕಳ್ಳತನದವಾದ 22 ಟೈರುಗಳ ಅಂದಾಜು ಮೌಲ್ಯ ಬೆಲೆ 8.20 ಲಕ್ಷ ರೂಗಳು ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಸುಮಾರು 22 ಲಕ್ಷ ರೂ. ಬೆಲೆ ಬಾಳುವ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಮಾಲಿನ ಒಟ್ಟು ಅಂದಾಜು ಮೌಲ್ಯ 30,20,000/- ರೂ ಗಳು ಆಗಿರುತ್ತದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದ ಆರೋಪಿತರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಪತ್ತೆ ಹಚ್ಚಿ ಸ್ವತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹಾರೂನ್ ಅಖರ್, ಎ.ಆರ್.ಮುಂದಿನಮನಿ, ಶ್ಯಾಸೀನ್ ಉಲ್ಲಾ ಎ.ಎಸ್.ಐ, ಗುರುಶಾಂತಯ್ಯ ಎ.ಎಸ್.ಐ, ದೇವೇಂದ್ರ ನಾಯ್ಕ, ಹನುಮಂತ ಕವಾಡಿ, ಸೈಯ್ಯದ್ ಗಫಾರ್, ಮಹ್ಮದ್ ಯೂಸೂಫ್ ಅತ್ತಾರ್, ಅಣ್ಣಯ್ಯ, ನಾಗರಾಜಯ್ಯ, ಮಾರುತಿ, ಮಂಜುನಾಥ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ ಮತ್ತು ಶಾಂತಕುಮಾರ್ ಅವರನ್ನು ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



