ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಸಿದ್ದ ಸುಮಾರು 18.75 ಲಕ್ಷ ರೂ. ಮೌಲ್ಯದ 327 ಸಾಗುವಾನಿ ಮರದ ತುಂಡುಗಳನ್ನು ಚನ್ನಗಿರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಮಲ್ಲೇನಹಳ್ಳಿ ಗ್ರಾಮದ ವಾಟರ್ ಟ್ಯಾಂಕ್ ಹತ್ತಿರ ಹಾಗೂ ಸಿದ್ದಪ್ಪ ಎಂಬುವರ ನಿವಾಸದ ಪಕ್ಕದಲ್ಲಿ ಸಾಗುವಾನಿ ಮರದ ತುಂಡು ಪತ್ತೆಯಾಗಿವೆ. ಮರ ಕಡಿಯಲು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು.
ದಾವಣಗೆರೆ ನಗರದ ಶಕ್ತಿ ನಗರದ ವಾಸಿಯೊಬ್ಬರಿಗೆ ಸೇರಿದ ಮರದ ತುಂಡುಳಾಗಿವೆ. ಈ ಬಗ್ಗೆ ಖಿಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ವಶ ತುಂಡು ಪಡಿಸಿಂಡು ಪ್ರಕರಣ ದಾಖಲಿಸಲಾಗಿದೆ. ಚನ್ನಗಿರಿ ಪಿಎಸ್ಐ ಎಂ.ವಿ. ಮೇಘರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ಟಿ.ಸಿ. ರವಿಕುಮಾರ್, ರಾಘವೇಂದ್ರ, ಶಿವಲಿಂಗ, ಉಮೇಶ್ ದಾಳಿಯಲ್ಲಿ ಭಾಗವಹಿಸಿದ್ದರು.



