Connect with us

Dvgsuddi Kannada | online news portal | Kannada news online

ದಾವಣಗೆರೆ: ನಟ ಸುದೀಪ್ ಬರೋದು ವಿಳಂಬ; ನೂರಾರು ಕುರ್ಚಿ ಮುರಿದು ಹಾಕಿದ ಅಭಿಮಾನಿಗಳು..!

ದಾವಣಗೆರೆ

ದಾವಣಗೆರೆ: ನಟ ಸುದೀಪ್ ಬರೋದು ವಿಳಂಬ; ನೂರಾರು ಕುರ್ಚಿ ಮುರಿದು ಹಾಕಿದ ಅಭಿಮಾನಿಗಳು..!

ದಾವಣಗೆರೆ: ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠದ ವಾಲ್ಮೀಕಿ ಜಾತ್ರೆಗೆ ಇಂದು ನಟ ಕಿಚ್ಚ ಸುದೀಪ್‌ ಆಗಮಿಸಬೇಕಿತ್ತು. ಆದರೆ ಅವರು ಬರೋದು ಸ್ವಲ್ಪ ವಿಳಂಬವಾದ ಹಿನ್ನೆಲೆ ಅಭಿಮಾನಿಗಳು ರೊಚ್ಚಿಗೆದ್ದು, ಕಿಚ್ಚಾ, ಕಿಚ್ಚಾ ಎಂದು ಘೋಷಣೆ ಕೂಗಿ ನೂರಾರು ಕುರ್ಚಿ ಮುರಿದು ಹಾಕಿದ್ದಾರೆ.

ಸುದೀಪ್ ನೋಡಲು ನೂರಾರು ಅಭಿಮಾನಿಗಳು ಕಾಯುತ್ತಿದ್ದರು. ವಿಳಂಬ ಆಗಿದ್ದಕ್ಕೆ ಕೂಗಾಟ ಜೋರಾಗಿತ್ತು. ಪೊಲೀಸರು ಅಭಿಮಾನಿಗಳ ಕಂಟ್ರೋಲ್‌ ಮಾಡಲು ಹರಸಾಹಸಪಟ್ಟರು. ಕೊನೆಗೆ ಲಾರಿ ಬೀಸಿದರು ಇದರಿಂದ ಖುರ್ಚಿಗಳು ಮುರಿದು ಬಿದ್ದವು.

ಈ ವಿಚಾರವಾಗಿ ವಾಲ್ಮೀಕಿ ಪ್ರಸನಾನಂದ ಪುರಿ ಸ್ವಾಮೀಜಿ ಮಾತನಾಡಿ, ನಟ ಸುದೀಪ್ ಜಾತ್ರೆಗೆ ಬರಲ್ಲವೆಂದು ಸ್ಪಷ್ಟನೆ ನೀಡಿದರು. ಹೆಲಿಕಾಪ್ಟರ್‌ನಲ್ಲಿ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಬರಬೇಕಿತ್ತು. ಬೆಂಗಳೂರಿನಲ್ಲಿ ಏರ್‌ಶೋ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿ ಬರಲು ಆಗಿಲ್ಲ. ಹೀಗಾಗಿ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಬರಲ್ಲವೆಂದು ತಿಳಿಸಿದರು. ವಾಲ್ಮೀಕಿ ಪ್ರಸನ್ನಾನಂದಪುರಿಶ್ರೀ ಸ್ಪಷ್ಟನೆ ಬಳಿಕ ಬೆಂಬಲಿಗರು ಸುಮ್ಮನಾಗಿ. ಜಾತ್ರೆಗೆ ಬಂದವರು ವಾಪಸಾದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top