ದಾವಣಗೆರೆ: ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಾಳೆ ( ಜ.31) ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿಗೆ ಆಗಮಿಸಲಿದೆ ಎಂದು ಪಕ್ಷದ ಜಿಲ್ಲಾವಕ್ತಾರ ಜೆ.ಅಮಾನುಲ್ಲಾ ಖಾನ್ ಮಾಹಿತಿ ನೀಡಿದ್ದಾರೆ.
ಕೊಂಡಜ್ಜಿ ಮಾರ್ಗವಾಗಿ ಪಂಚರತ್ನ ರಥಯಾತ್ರೆಯು ಕರ್ಲಹಳ್ಳಿ,ಗುತ್ತೂರು, ಬೆಳ್ಳೂಡಿ, ಎಕ್ಕೇಗುಂದಿ, ಭಾನುವಳ್ಳಿ, ಬನ್ನಿಕೋಡು ಗ್ರಾಮದಲ್ಲಿ ಸಂಚರಿಸಿ ವಾಸ್ತವ್ಯ ಮಾಡಲಿದೆ. ಫೆ.1 ರಂದು ಬೆಳಗ್ಗೆ ಕೆ.ಬೇವಿನಹಳ್ಳಿ, ಮಿಟ್ಲಕಟ್ಟೆ, ದೇವರಬೆಳಕೆರೆ, ಕುಣೆಬೆಳಕೆರೆ,ನಿಟ್ಟೂರು, ಮಲೇಬೆನ್ನೂರು ಸಂಚರಿಸಲಿದೆ ನಂತರ ಮಲೇಬೆನ್ನೂರಿನಲ್ಲಿ ಬೃಹತ್ ಬಹಿರಂಗಸಭೆ ನಡೆಯಲಿದೆ. ಬಳಿಕ ಜಿಗಳಿ, ಜಿ.ಬೇವಿನಹಳ್ಳಿ, ಕೊಕ್ಕನೂರು, ಹಿಮನಡಸಘಟ್ಟ, ಗೋವಿನಹಾಳ್, ವಾಸನ, ಕಡರನಾಯಕನಹಳ್ಳಿ, ಹೊಳೆಸಿರಿಗೆರೆ, ಕಮಲಾಪುರ, ಹೊಸಳ್ಳಿಯಲ್ಲಿ ಸಂಚರಿಸಲಿದೆ ಅಂದು ಸಂಜೆ 6 ಗಂಟೆಗೆ ಹರಿಹರದ ಫಕ್ಕೀರ ಸ್ವಾಮಿ ಮಠದಿಂದ ಭವ್ಯ ಮೆರವಣಿಗೆ ನಡೆಸಲಾಗುವುದು ಹಾಗೂ ಗಾಂಧಿಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವ ವಹಿಸಲಿದ್ದಾರೆ.ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ,ಹಿರಿಯ ಉಪಾಧ್ಯಕ್ಷ ಎನ್.ಎಂ ನಬಿಸಾಬ್,ಪ್ರಧಾನ ಕಾರ್ಯದರ್ಶಿ ಎಸ್.ಎಲ್ ಬೋಜೆಗೌಡ,ಮಾಜಿ ಸಚಿವ ಬಿ.ಬಿ ನಿಂಗಯ್ಯ,ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರುಗಳು ಕ್ಷೇತ್ರದಾದ್ಯಂತ ಸಂಚರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಟಿ.ಅಸ್ಗರ್,ಬಾತಿ ಶಂಕರ್, ಎಸ್.ಓಂಕಾರಪ್ಪ, ನರಸಿಂಹಮೂರ್ತಿ, ಜಮೀರ್ ಅಹಮದ್, ಎಸ್.ಹೆಚ್ ದುಗ್ಗೇಶ್, ಇಮ್ತೀಯಾಜ್ ಖಾನ್,ಇಬ್ರಾಹಿಂ ಉಪಸ್ಥಿತರಿದ್ದರು.



