ರಾಣೇಬೆನ್ನೂರು; ನಗರದ ಕಾಕಿ ಜನ ಸೇವಾ ಸಂಸ್ಥೆಯು ಪ್ರತಿವರ್ಷದಂತೆ ಈ ವರ್ಷವೂ ಸಹ ಫೆ.11ರಂದು ದಿ.ದೊಡ್ಡನಾಗಪ್ಪ ತಿ. ಕಾಕಿ – ಹಾಗೂ ದಿ : ಸಣ್ಣನಾಗಪ್ಪ ತಿ. ಕಾಕಿ ಸ್ಮರಣೆಯಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಯು ಆಯೋಜಿಸಿದೆ.
ಸ್ಪರ್ಧಾ ಯಶಸ್ವಿಗೆ ಕುರುಹಿನ ಶೆಟ್ಟಿ ಸಮಾಜ ಸೇವಾ ಸಂಘ, ಜೆಸಿಐ, ರಾಣೇಬೆನ್ನೂರ ಜೆಸಿಸ್ ಕ್ಷೇಮಾಭಿವೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಸೌರಭ ಜಾನಪದ ಕಲಾ ವೇದಿಕೆ ಸಹಯೋಗ ನೀಡಿದೆ. ಸ್ಪರ್ಧಾ ವಿಜೇತರಿಗೆ ಕ್ರಮವಾಗಿ 25,000-( ಪ್ರಥಮ)-20,000-( ದ್ವಿತೀಯ) 15,000-( ತೃತೀಯ ) ಹಾಗೂ 10,000-( ಚತುರ್ಥ ) ನಗದು ಮೂತ್ತ ಸೇರಿದಂತೆ ಆಕರ್ಷಕ ಪಾರಿತೋಷಕ ಪ್ರಮಾಣಪತ್ರ ಮತ್ತು ಪಾಲ್ಗೊಂಡ ಎಲ್ಲಾ ಸ್ಪರ್ದಾಳುಗಳಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ದೊರೆಯಲಿದೆ.
ನಿಯಮ ಮತ್ತು ನಿಬಂಧನೆಗೂಳಪಟ್ಟು ಸ್ಪರ್ಧೆಗಳು ನಡೆಯಲಿದ್ದು, ಆಸಕ್ತರು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಸ್ಪರ್ಧಾ ಆಯೋಜಕರಾದ ಶ್ರೀನಿವಾಸ ಕಾಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ :-9449973158-9242881170-9844997082-94838-13785 ಸಂಪರ್ಕಿಸಿ.



