ದಾವಣಗೆರೆ: ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಮುಂಬರುವ ಚುನಾವಣೆಯಲ್ಲಿ ವಿಜಯದ ಕಡೆಗೆ ಸದೃಢ ಹೆಜ್ಜೆಗಳನ್ನು ಇಡುವ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತದ ವಾರ್ಡ ನಂಬರ್ 20ರಲ್ಲಿ” ಬೂತ್ ವಿಜಯ್ ಅಭಿಯಾನ” ವನ್ನು ಹಮ್ಮಿಕೊಳ್ಳಲಾಯಿತು.
ಈ ಅಭಿಯಾನಕ್ಕೆ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರಾದ ಯಶವಂತರಾವ್ ಜಾಧವ, ಜಿಲ್ಲಾ ಉಪಾಧ್ಯಕ್ಷ ನಿವಾಸ ದಾಸಕರಿಯಪ್ಪ, ಮಾಜಿ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ ಬಿ.ಜಿ.ಅಜಯ್ ಕುಮಾರ್, ಮಂಡಲದ ಅಧ್ಯಕ್ಷ ಆನಂದರಾವ್ ಶಿಂಧೆ, ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ನೀಡಿ ದ್ವಜಾಹರೋಣ ನೆರವೇರಿಸಿದರು.
ಈ ಸಂದರ್ಬದಲ್ಲಿ ಬೂತ್ ಅಧ್ಯಕ್ಷರುಗಳಾದ ಅಶೋಕ, ಚಂದ್ರಶೇಖರ, ಶಾಂತಕುಮಾರ್ ಗೋಪಿ, ಪ್ರದೀಪ್, ಗಣೇಶ್, ಬಸವರಾಜ್ ನಾಯ್ಕ ವಾರ್ಡಿನ ಪ್ರಮುಖರಾದ ಕೃಷ್ಣ,ಮಹಾನಗರ ಪಾಲಿಕೆ ಸದಸ್ಯ ಉಮೇಶ್, ಉಮೇಶ್, ಮಾದೇಶ್ ಪೆಂಟರ್ ರಾಜು, ಗೋವಿಂದ ನಾಯ್ಕ, ಚಂದ್ರಶೇಖರ್, ನಟರಾಜ ಬರ್ನಾಟ, ಸಿದ್ದೇಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ ಪಾಟೀಲ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಗೌತಮ್ ಜೈನ್, ಜಿಲ್ಲಾ ಆಸ್ಪತ್ರೆಯ ನಿರ್ದೇಶಕರುಗಳಾದ ಟಿಂಕರ್ ಮಂಜಣ್ಣ, ಕಿಶೋರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಪಾಲ್ಗೊಂಡಿದ್ದರು.



