ಬೆಂಗಳೂರು: ಶೀಘ್ರದಲ್ಲಿಯೇ ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗದಲ್ಲಿ ಹವಾನಿಯಂತ್ರಿತ 50 ಎಲೆಕ್ಟ್ರಿಕ್ ಬಸ್ಗಳು ಸಂಚರಿಸಲಿವೆ. ಬೆಂಗಳೂರು, ಮೈಸೂರಿನಲ್ಲಿ ಚಾರ್ಚಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಚಾರ್ಚಿಂಗ್ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದೆ.
ಕೆಎಸ್ಆರ್ಟಿಸಿಬೆಂಗಳೂರಿನಿಂದ ಮೈಸೂರಿಗೆ ಮೊದಲ ಎಲೆಕ್ಟ್ರಿಕ್ ಬಸ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಕೆಎಸ್ಆರ್ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀರಾಮುಲು, ಕೆಎಸ್ಆರ್ಟಿಸಿಗೆ 3,500 ಹೊಸದಾಗಿ ಬಸ್ಗಳನ್ನು ಖರೀದಿಸಲಾಗುತ್ತಿದೆ. ಫೆಬ್ರುವರಿಗೆ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದರು.
ಏಲೆಕ್ಟಾ ಕಂಪನಿ ಅಭಿವೃದ್ಧಿಗೊಳಿಸಿರುವ ಈ ಬಸ್, ಆರಾಮದಾಯಕ ಪುಶ್ಬ್ಯಾಕ್ ಸೀಟ್ ಹೊಂದಿದೆ. ಗುಡ್ಡಗಾಡು, ಬಯಲು ಪ್ರದೇಶಗಳಲ್ಲಿ ಸುಗಮವಾಗಿ ಸಂಚರಿಸಲಿದೆ. ಪ್ರತಿ ಚಾರ್ಜ್ಗೆ 300 ಕಿ.ಮೀ ದೂರ ಪ್ರಯಾಣಿಸಬಹುದಾಗಿದೆ. 3 ಗಂಟೆಯ ಅವಧಿಯಲ್ಲಿ ಬ್ಯಾಟರಿ ಸಂಪೂರ್ಣ ರೀಚಾರ್ಜ್ ಆಗಲಿದೆ. ನಿರ್ವಾಹಕ, ಚಾಲಕ ಸೇರಿ 43 ಆಸನ ಸಾಮರ್ಥ್ಯವಿದೆ. ಸಿ.ಸಿ.ಟಿ.ವಿ ಕ್ಯಾಮೆರಾಗಳು, ತುರ್ತು ಬಟನ್, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಕಿಟ್, ಗ್ಲಾಸ್ ಹ್ಯಾಮರ್ ಸುರಕ್ಷತಾ ಕ್ರಮಗಳಿವೆ. ಪ್ರಯಾಣಿಕರ ಬಳಕೆಗೆ ವೈ-ಫೈ ಮತ್ತು ಪ್ರತಿ ಆಸನಕ್ಕೂ ಯುಎಸ್ಬಿ ಚಾರ್ಜರ್ ಅಳವಡಿಸಲಾಗಿದೆ. ಪ್ರಯಾಣಿಕರ ಲಗೇಜ್ ಇಡಲು ಸ್ಥಳಾವಕಾಶವಿದೆ.



