ದಾವಣಗೆರೆ: ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸಮೀಪದ ಕೋಮಾರನಹಳ್ಳಿ ಬಳಿ ಅಕ್ರಮವಾಗಿ ಸಾಗಾಟ ಮಾಡುತಗತಿದ್ದ 165 ಚೀಲ ಪಡಿತರ ಅಕ್ಕಿ ಜತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
165 ಚೀಲ ಅಕ್ಕಿ, ತೂಕದ ಯಂತ್ರ, ಲಾರಿ, ಬೊಲೆರೋ ವಾಹನ ವಶ ಪಡಿಸಿಕೊಳ್ಳಲಾಗಿದೆ. ಮಲೇಬೆನ್ನೂರಿನ ಜಾಕೀರ್ ಹಾಗೂ ರಾಮನಗರದ ಜಿಲ್ಲೆಯ ಭರತ್ ಎಂಬುವರನ್ನು ಬಂಧಿಸಲಾಗಿದೆ. ಕಡಿಮೆ ಬೆಲೆಗೆ ವಿವಿಧ ಕಡೆ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಒಟ್ಟು ಅಕ್ಕಿ ಮೌಲ್ಯ 1.25 ಲಕ್ಷ ಎಂದು ಅಂದಾಜಿಸಲಾಗಿದೆ. ಆಹಾರ ಇಲಾಖೆ ನಿರೀಕ್ಷಕ ಎಂ. ನಜರುಲ್ಲಾ, ಪಿಎಸ್ ಐ ರವಿಕುಮಾರ್ ದಾಳಿ ನಡೆಸಿದ್ದಾರೆ.



