ದಾವಣಗೆರೆ: ಆಯುಷ್ ಇಲಾಖೆ ವತಿಯಿಂದ ವಿಶ್ವ ಮೂಲವ್ಯಾಧಿ ದಿನದ ಪ್ರಯುಕ್ತ, ಉಚಿತ ಮೂಲವ್ಯಾಧಿ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಡಿ.13 ರಂದು ಬೆಳಿಗ್ಗೆ 9 ರಿಂದ ಸಂಜೆ 04 ಗಂಟೆಯವರೆಗೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಸುಧಾ.ಹೆಚ್.ಎಂ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಶಿವಕುಮಾರ್.ಬಿ, ಆಯುಷ್ ವಿಭಾಗ ಹಿರಿಯ ವೈದ್ಯಾಧಿಕಾರಿ ಭಾಗವಹಿಸಲಿದ್ದು, ಮೂಲವ್ಯಾಧಿ ರೋಗಗಳಾದ ಪೈಲ್ಸ್, ಫಿಜರ್, ಭಗಂದರ ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



