ದಾವಣಗೆರೆ: ಬೇರೆ ವಾಹನದ ನಂಬರ್ ತನ್ನ ಬೈಕ್ ಗೆ‌ ಹಾಕಿಕೊಂಡು ಓಡಾಡುತ್ತಿದ್ದವನ ಮೇಲೆ ಕೇಸ್ ದಾಖಲು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಇನ್ನೊಬ್ಬರ ವಾಹನದ ನಂಬರ್‌ ತನ್ನ ವಾಹನಕ್ಕೆ ಅಳವಡಿಸಿಕೊಂಡು ಓಡಾಡುತ್ತಿದ್ದ ಆರೋಪಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲೆಯ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಜಯಪ್ರಕಾಶ್ ಪಿ.ಬಿ. ಮತ್ತು ಸಿಬ್ಬಂದಿ ರಂಗಸ್ವಾಮಿ ಬಿ.ಹೆಚ್ ಅಗರು ವಸಂತ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುವ ಸಮಯದಲ್ಲಿ ದಾವಣಗೆರೆಯ ಗಡಿಯಾರ ಕಂಬದ ಕಡೆಯಿಂದ ಶಿವಾಜಿ ಸರ್ಕಲ್ ಕಡೆಗೆ ಹೋಗಲು ಬಂದ ಒಂದು ಡಿಯೋ ಹಳದಿ ಬಣ್ಣದ ಸ್ಕೂಟರ್ ಚಾಲಕ ತಪಾಸಣೆ ಮಾಡುತ್ತಿದ್ದನ್ನು ನೋಡಿ ಏಕಾಏಕಿ ವಾಪಾಸ್ಸು ವಾಹನವನ್ನು ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಆಗ ಸಿಬ್ಬಂದಿಯ ಸಹಾಯದಿಂದ ಚಾಲಕನನ್ನು ಹಿಡಿದು ವಾಹನ (ನಂ. ಕೆ.ಎ.17 ಇಜಿ-5103) ಮತ್ತು ಚಾಲಕನ ಹೆಸರು ವಿಳಾಸ ವಿಚರಣೆ ಮಾಡಿದಾಗ ಬೈಕ್ ಸವಾರ ಸುನಿಲ್, ವಾಸ ದೇವರಾಜ್ ಅರಸ್ ಲೇಔಟ್, ಬಿ-ಬ್ಲಾಕ್, ದಾವಣಗೆರೆ ಎಂದು ತಿಳಿದು ಬಂದಿದೆ.

ಆಗ ಮೋಟಾರ್ ಸ್ಕೂಟರ್ ದಾಖಲಾತಿಗಳನ್ನು ಕೇಳಿದಾಗ ಈ ವಾಹನವನ್ನು ಆರ್.ಟಿ.ಓ ಕಛೇರಿಯಲ್ಲಿ ನೊಂದಣಿ ಮಾಡಿಸಿರುವುದಿಲ್ಲ ಅಂತಾ ತಿಳಿಸಿದ್ದಾನೆ. ನೋಂದಣಿ ಸಂಖ್ಯೆಯ ಮಾಲೀಕತ್ವದ ಬಗ್ಗೆ ಸ್ಥಳ ದಂಡ ವಿಧಿಸುವ ಎಂ.ಎಫ್.ಡಿ ಮೆಶಿನ್ ಮತ್ತು ಠಾಣೆಯ ಎಫ್.ಟಿ.ವಿ.ಆರ್ ತಂತ್ರಾಂಶದಲ್ಲಿ ಪರೀಶೀಲಿಸಲಾಗಿ ಮಾಡೆಲ್-2012, ಹೊಂಡಾ ಡಿಯೋ ಬಿಳಿ ಬಣ್ಣ, ಇಂಜಿನ್ ನಂ-JF39E0021282 ಛಾಸ್ಸೀ ನಂ-ME4JF391DC8021284 ಎಂತಾ ಇದ್ದು, ಮಾಲೀಕರ ಹೆಸರು ಚಿಂದೋಡಿ ಎಸ್ ಮಾನಸಾ ಗಂಡ ಸಿದ್ದರಾಜ್ ಚಿಂದೋಡಿ ವಾಸ: 4471/130 ಶಂಕರ್ ಲೀಲಾ ಗ್ಯಾಸ್ ಏಜೆನ್ಸಿ ಹತ್ತಿರ ಎಂ.ಸಿ.ಸಿ ಬಿ ಬ್ಲಾಕ್ ದಾವಣಗೆರೆ ಎಂತಾ ತಿಳಿದು ಬಂದಿರುತ್ತದೆ.

ಸುನಿಲ್ ತನ್ನ ವಾಹನವನ್ನು ಆರ್.ಟಿ.ಓ ಕಚೇರಿಯಲ್ಲಿ ನೋಂದಣಿ ಮಾಡದೇ ಸರ್ಕಾರಕ್ಕ ಮೋಸ ಮಾಡಿದ್ದು, ಮತ್ತು ಮೂಲ ಮಾಲೀಕರಿಗೂ ಸಹ ಮೋಸ ಮಾಡಿರುತ್ತಾನೆ. ಯಾವುದೋ ಕೃತ್ಯ ಎಸಗುವ ದುರದ್ದೇಶದಿಂದ ಇನ್ನೊಬ್ಬರ ವಾಹನದ ನಂಬರ್‌ನ್ನು ತನ್ನ ವಾಹನಕ್ಕೆ ಅಳವಡಿಸಿರುವುದು ಕಂಡು ಬಂದ ಮೇರೆಗೆ ಈತನ ಮೇಲೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ನಗರ ಪೊಲೀಸ್‌ ಉಪಾಧೀಕ್ಷಕರಾದ ನರಸಿಂಹ ವಿ,ತಾಮ್ರಧ್ವಜ ರವರು ಪ್ರಶಂಸಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *