ದಾವಣಗೆರೆ: ಜಿಲ್ಲೆಯ ಹರಹರದಲ್ಲಿ ಸರಣಿ ಮನೆ ಕಳ್ಳತನ ಮಾಡಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 4.52 ಲಕ್ಷ ಮೌಲ್ಯದ ಬಂಗಾರ 48 ಸಾವಿರದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ದಾದಪೀರ್ ಸಂಪುದ್ದೀನ್ ದಾವಣಗೆರೆ ನಗರದ ವಿನೋಬ ನಗರದ ನಿವಾಸಿ ಆಗಿದ್ದಾನೆ. ಸಿಪಿಐ ಸತೀಶ್ ಕುಮಾರ್ ನೇತೃತ್ವದಲ್ಲಿ ಪಿಎಸ್ ಐಗಳಾದ ಶಂಕರಗೌಡ ಪಾಟೀಲ್ , ಅಬ್ದುಲ್ ಖಾದರ್ ಜಿಲಾನಿ, ಚಿದಾನಂದಪ್ಪ,ಮಹದೇವಪ್ಪ ಸಿದ್ದಪ್ಪ ಬತ್ತೆ, ಮಂಜನಾಥ್ ಕಲ್ಲೇದೇವರು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.



