ದಾವಣಗೆರೆ: ನಗರದ ಪಾಲಿಕ್ಲಿನಿಕ್ ಆಸ್ಪತ್ರೆ ಆವರಣದಲ್ಲಿ ಬೀದಿನಾಯಿಗಳಿಗೆ ಹಾಗೂ ಸಾಕು ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ರೇಬೀಸ್ ಲಸಿಕಾ ಕಾರ್ಯಕ್ರಮವನ್ನು ಪಾಲಿಕೆ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಉದ್ಘಾಟಿಸಿದರು.
ಪ್ರತಿನಿತ್ಯ ಪಶುಸಂಜಿವೀನಿ ವಾಹನದ ಮೂಲಕ ನಗರದ ವಾರ್ಡ್ಗಳಿಗೆ ಭೇಟಿ ನೀಡಿ ಸಾಕುನಾಯಿ ಹಾಗೂ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್.ಎಸ್.ಸುಂಕದ, ಪಾಲಿಕ್ಲಿನಿಕ್ನ ಉಪನಿರ್ದೇಶಕ ಡಾ. ಟಿ.ಆರ್.ವೀರೇಶ್, ಮುಖ್ಯ ಪಶುವೈದ್ಯಾಧಿಕಾರಿ ಡಾ.ಶಿವಕುಮಾರ್.ಜಿ.ಎಸ್, ಡಾ.ಸತೀಶ್, ಡಾ.ನಿತಿನ್, ಡಾ.ಉಮಾಶಂಕರ್, ಡಾ.ಗಿರೀಶ್ ಇತರರು ಭಾಗವಹಿಸಿದ್ದರು.



