ದಾವಣಗೆರೆ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಕೆ.ಟಿ.ಜೆ. ನಗರ ಪೊಲೀಸ್ ದಾವಣಗೆರೆ ನಗರದ ಪಿ.ಬಿ. ರಸ್ತೆಯ ನಿಸರ್ಗ ಕಂಪರ್ಟ್ ಎದುರುಗಡೆಗೆ ಅಕ್ರಮವಾಗಿ ಪಡಿತರ ವಿತರಣೆಯ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದ 20 ಸಾವಿರ ರೂಪಾಯಿ ಬೆಲೆ ಬಾಳುವ ಆಟೋ ಮತ್ತು 8,700/- ರೂ ಬೆಲೆಬಾಳುವ 580 ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರುಗಳಾದ ಮಂಜುನಾಥ, ವಾಸ: ಹರಿಹರ, ಸಂತೋಷ, ವಾಸ: ಜಾಲಿನಗರ, ಕಲೀಂವುಲ್ಲಾ, ದಾವಣಗೆರೆ ಇವರನ್ನು ಬಂದಿಸಲಾಗಿದೆ. ದಾವಣಗೆರೆ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಡಿವೈಎಸ್ ಪಿ ನರಸಿಂಹ ವಿ.ತಾಮ್ರದ್ವಜ, ವೃತ್ತ ನಿರೀಕ್ಷಕ ಶಶಿಧರ ನೇತೃತ್ವದಲ್ಲಿ ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯ ಪಿಎಸ್ಐ ಪ್ರಭು ಡಿ ಕೆಳಗಿನ ಮನೆ, ಎ ಎಸ್ ಐ ಬಿ ಜಯಪ್ಪ, ಸಿಬ್ಬಂದಿಗಳಾದ ಮಂಜನಗೌಡ, ಬಿ.ಆರ್ ರವಿ, ಪ್ರಸನ್ನ ಮತ್ತು ಆಹಾರ ನಿರೀಕ್ಷಕಿ ಶಬೀನಾ ಪರ್ವಿನ್ ತಂಡ ದಾಳಿ ಮಾಡಿದೆ. ಈ ದಾಳಿಯನ್ನು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿದ್ದಾರೆ.



