ದಾವಣಗೆರೆ: ಆಜಾದ್ ನಗರ, ಭಾಷಾ ನಗರದಲ್ಲಿ ಬುರ್ಖಾ ಧರಿಸಿ ಮಕ್ಕಳ ಕೈ ಹಿಡಿದು ಎಳೆಯುತ್ತಿದ್ದ ಯುವಕನನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಯುವಕ ದಾವಣಗೆರೆ ನಗರದ ಹೊರವಲಯದ ಕಲ್ಪನಹಳ್ಳ ನಿವಾಸಿ ಎನ್ನಲಾಗಿದ್ದು ನಿಖರ ಹೆಸರು ಗೊತ್ತಾಗಿಲ್ಲ. ನಿರಂತರವಾಗಿ ಬುರ್ಖಾ ಹಾಕಿಕೊಂಡು ಸುತ್ತಾಡುತ್ತಿದ್ದ ಯುವಕನ ಚಲನವಲನ ಬಗ್ಗೆ ಸ್ಥಳೀಯರಿಗೆ ಸಂಶಯ ಉಂಟಾಗಿದೆ. ಸ್ಥಳೀಯರು ಯುವಕನಿಗೆ ಥಳಿಸಿ ಆಜಾದ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಕ್ಕಳ ಕೇಸ್ ಆದ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ. ಸದ್ಯ ಆರೋಪಿ ಯುವಕ ಮಹಿಳಾ ಠಾಣೆ ಪೊಲೀಸರ ವಶದಲ್ಲಿದ್ದಾನೆ.



