ದಾವಣಗೆರೆ; ಜಿಲ್ಲೆಯ ಮಾಯಕೊಂಡ, ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೈತರ ಅಡಿಕೆ ತೋಟದಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾಯಕೊಂಡ ಪೊಲೀಸರು ಬಂಧಿಸಿದ್ದಾರೆ.
ಮಾಯಕೊಂಡ ಪೊಲೀಸ್ ಠಾಣೆಯ ಚಿನ್ನಸಮುದ್ರ,ಅಣ್ಣಾಪುರ, ಕಳೂರು ಹಾಗೂ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನೂರು ಗ್ರಾಮದಲ್ಲಿ ರೈತರ ಜಮೀನಲ್ಲಿ ರಾತ್ರಿ ವೇಳೆ ಆರೋಪಿಗಳು ಅಡಿಕೆ ಕಳ್ಳತನ ಮಾಡುತ್ತಿದ್ದರು. ಆರೋಪಿಗಳು ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿಯ ಆಟೋ ಡ್ರೈವರ್ ರಾಘವೇಂದ್ರ (29), ನಾಗರಾಜ (28) ಹಾಗೂ ಮಂಜುನಾಥ್ (28) ಬಂಧಿಸಲಾಗಿದೆ. 1.34 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಲಕ್ಷ ಮೌಲ್ಯದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಮೂವರು ಆರೋಪಿಗಳು ರೈತರ ಕಳ್ಳತನ ಮಾಡಿದ್ದ ಅಡಿಕೆಯನ್ನು ಮಾರಾಟ ಮಾಡಿದ್ದರು.



