ದಾವಣಗೆರೆ: ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಅವರಗೆರೆ ಹಳೇ ಪಿ.ಬಿ ರಸ್ತೆಯಿಂದ ಪಿ.ಬಿ ಬಡಾವಣೆ ಕಡೆಗೆ ಹೋಗುವ ರಸ್ತೆಯಲ್ಲಿ ಇಬ್ಬರು ಹಣ ಸುಲಿಗೆಕೋರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಪಾಂಡಿಚೇರಿ ಮೂಲದ ಇಬ್ರಾಹಿಂ ಸಹೋದರ ರಫೀಕ್ ಗೆ ಕಡಿಮೆ ಬೆಲೆಯಲ್ಲಿ ಚೆನ್ನಾಗಿರುವ ಬೆಡ್ಗಳನ್ನು ಕೊಡುತ್ತೇವೆ ಎಂದು ಕರೆಯಿಸಿ, ಹೊಂಡಾ ಯೂನಿಕಾರ್ನ್ ಬೈಕಿನಲ್ಲಿ ಬಂದ ಆರೋಗಳು ಇಬ್ರಾಹಿಂ ಮತ್ತು ರಫೀಕ್ ಬಳಿ ಇದ್ದ 05,00,000/-ರೂಗಳನ್ನು ಸುಲಿಗೆ ಮಾಡಿಹೋಗಿರುವ ಬಗ್ಗೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ದಾವಣಗೆರೆ ನಗರ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಬಸವರಾಜ್ ಬಿ.ಎಸ್ ಮಾರ್ಗದರ್ಶನಲ್ಲಿ ಆಜಾದ್ ನಗರ ವೃತ್ತದ ಗಜೇಂದ್ರಪ್ಪ ಕೆ.ಎನ್ ನೇತೃತ್ವದಲ್ಲಿ ಆರ್.ಎಂ.ಸಿ ಠಾಣೆಯ ಪಿ.ಎಸ್.ಐ ನಾಗರಾಜ.ಜಿ ಹಾಗೂ ಶ್ರೀಮತಿ ಪುಷ್ಪಲತಾ ಮತ್ತು ಸಿಬ್ಬಂದಿಯ ಆರೋಪಿಗಳಾದ 01) ದುರುಗಪ್ಪ @ ದುರುಗಪ್ಪ ಕೊರಚರ, 36ವರ್ಷ, ವಾಸ-ಯಲ್ಲಪುರ ಗ್ರಾಮ ಹರಪನಹಳ್ಳಿ ತಾಲ್ಲೂಕ್ ವಿಜಯ ನಗರ ಜಿಲ್ಲೆ, 02) ಗಣೇಶ, 22 ವರ್ಷ, ವಾಸ-ಆಂಜನೇಯ ಬಡಾವಣೆ ಹರಪನಹಳ್ಳಿ ಟೌನ್, ವಿಜಯ ನಗರ ಜಿಲ್ಲೆ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಿಂದ ಸುಲಿಗೆ ಮಾಡಿದ 04 ಲಕ್ಷ ರೂ ನಗದು ಹಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಪ್ಪು ಬಣ್ಣದ ಹೊಂಡ ಯೂನಿಕಾರ್ನ್ ಬೈಕನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಪ್ರಕರಣದ ಆರೋಪಿ ಪತ್ತೆ ಹಾಗೂ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಮತ್ತು ಅಪರ ಪೊಲೀಸ್ ಅಧೀಕ್ಷಕ ಅರ್.ಬಿ ಬಸರಗಿ ಶ್ಲಾಘಿಸಿದ್ದಾರೆ.



