ಕ್ಷತ್ರಿಯರು ಒಗ್ಗೂಡುವ ಕಾಲ ಸನ್ನಿಹಿತ: ಉದಯ್ ಸಿಂಗ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ಡಿವಿಜಿ ಸುದ್ದಿ, ದಾವಣಗೆರೆ:  ರಾಜ್ಯದಲ್ಲಿ ಬಹು ಸಂಖ್ಯಾತರಾಗಿರುವ ಕ್ಷತ್ರಿಯರು ಒಗ್ಗಟ್ಟಿನಿಂದ ರಾಜಕೀಯದಲ್ಲಿ ಅಧಿಕಾರ ಹಿಡಿಯುವ ಕಾಲ ಸನ್ನಿಹಿತವಾಗಿದೆ ಎಂದು ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಹೇಳಿದರು.

ನಗರದ ವಿಠ್ಠಲ ಮಂದಿರದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮತ್ತು ಕ್ಷತ್ರಿಯ ಸಮಾಜದ ಪಾಲಿಕೆ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ಷತ್ರಿಯರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು.  ರಾಜ ಮಹರಾಜರನ್ನ ಕಂಡಿರುವ ನಾವುಗಳು ಇವತ್ತು ಅಸಂಘಟಿತರಾಗಿದ್ದೇವೆ. ಇದರಿಂದ ಅಧಿಕಾರಕ್ಕಾಗಿ  ಬೇಡುವ ಸ್ಥಿತಿ ಬಂದಿದೆ. ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಸಹಸ್ರಯರ್ಜನ, ಶ್ರೀ ಶಿವಾಜಿ ಮಹಾರಾಜ ರಂತಹ ದೇವನು ದೇವತೆಗಳು ಕೂಡ ಕ್ಷತ್ರಿಯರಾಗಿದ್ದು, ಇಂತಹ ಸಮೂದಾಯಗಳಲ್ಲಿ ಹುಟ್ಟಿರುವ ನಾವುಗಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಶೋಷಣೆಗೆ ಒಳಗಾಗಿದ್ದೇವೆ.

kshetriy 2

ನಾವು ಅನುಭವಿಸಿದ ಕಷ್ಟಗಳನ್ನು ನಮ್ಮ ಮುಂದಿನ ಪೀಳಿಗೆ ಅನುಭವಿಸಬಾರದು ಎಂದರೆ ನಾವುಗಳು ನಮ್ಮಲ್ಲಿರುವ ಸಂಕೋಚಿತ ಮನೋಭಾವನೆ ಬಿಟ್ಟು ಸಂಘಟನೆಗೆ ಮಹತ್ವ ನೀಡಬೇಕಾಗಿದೆ ಎಂದು ಕರೆ ನೀಡಿದರು.

ಸಭೆಯಲ್ಲಿ ನೂತನ  ಕ್ಷತ್ರಿಯ ಸಮೂದಾಯದ ಪಾಲಿಕೆ ಸದಸ್ಯರಾದ  ಗಾಯತ್ರಿ ಬಾಯಿ, ಜಯಮ್ಮ, ರೇಖಾ ಸುರೇಶ್ ಗಂಡುಗಾಳೆ, ಮಂಜುನಾಥ ನಾಯ್ಕ, ಶಿವಪ್ರಕಾಶ್. ರಾಕೇಶ್ ಜಾಧವ್, ಅವರನ್ನು ಸನ್ಮಾನಿಸಿದರು.

ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಅದ್ಯಕ್ಷ ಯಶವಂತರಾವ್, ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್, ಡಾ.ಜಯಪ್ರಕಾಶ್ , ಜೊಳ್ಳಿ, ಅಜ್ಜಪ್ಪ ಪವಾರ್,  ಭರಣೆ ಹೋಟೆಲ್ ಹನುಂತರಾವ್, ಸಾಳಂಕಿ ಗುರು, ಗೊಂದಾಳೆ ಸಮಾಜದ ನರಸಿಂಗ್ ರಾವ್, ಬಂಜಾರ್ ಸಮಾಜದ ಹನುಮಂತನಾಯ್ಕ್, ನಾಮದೇವ, ಸಿಂಪಿ ಸಮಾಜದ ಜಗನ್ನಾಥ ಎಸ್ ಗಂಜಿಕಟ್ಟೆ, ಪಟ್ಟಿಗಾರ ಸಮಾಜದ ಪ್ರಮೋದ್ ಕಲುಬರ್ಗ,  ಸ್ವಕಳಸಾಳಿ ಸಮಾಜದ ಮುಖಂಡ ಭಾಗಿಯಾಗಿದ್ರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *