ದಾವಣಗೆರೆ: ಈ ಬಾರಿ ಸೆ.26ರಿಂದ ಅ.06 ವರೆಗೆ ನಗರ ದೇವತೆ ದುಗ್ಗಮ್ಮ ದೇವಸ್ಥಾನದಲ್ಲಿ ಅದ್ಧೂರಿ ದಸರಾ ಆಚರಿಸಲು ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.
ದಾವಸ್ಥಾನದಲ್ಲಿ ಟ್ರಸ್ಟ್ ನ ಗೌರವ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕೋವಿಡ್ ನಂತರ ಈ ವರ್ಷ ಪಾರಂಪರಿಕವಾಗಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನವ ರಾತ್ರಿಯ ಪ್ರತಿ ದಿನ ವಿಶೇಷ ಪೂಜೆ ಕೈಂಕರ್ಯಗಳು , ಸಾಮೂಹಿಕ ವಿವಾಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಸರಾ ಆಚರಣೆ ಸಂಬಂಧ ದೇವಸ್ಥಾನದಲ್ಲಿ ನಡೆಯುವ ಪೂಜಾ ಸೇವೆಗಳ ದರಗಳನ್ನು ಏರಿಸಬೇಕಾಗಿದೆ. ಪಂಚಾಮೃತ ಅಭಿಷೇಕಕ್ಕೆ 200, ಕುಂಬಾಭಿಷೇಕಕ್ಕೆ 100, ಕಳಸದ ಪೂಜೆಗೆ 50, ವಿಶೇಷ ದರ್ಶನಕ್ಕೆ 310 ದರ ನಿಗದಿಪಡಿಸಲಾಯಿತು. ದುರ್ಗಾಂಬಿಕ ದೇವಸ್ಥಾನ ಟ್ರಸ್ಟ್ ನಿಂದ ನಿರ್ಮಿಸಿದ 32 ಮಳಿಗೆಗಳ ಕಟ್ಟಡದ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ಇನ್ನೂ ಕ್ರಮ ವಹಿಸಿಲ್ಲ. 50 ಲಕ್ಷ ಹೊರೆಯಾಗಿದೆ ಎಂದು ಯಶವಂತ್ ರಾವ್ ಜಾಧವ್ ಆರೋಪ ಮಾಡಿದರು.
ಸಭೆಯಲ್ಲಿ ಟ್ರಸ್ಟ್ ನ ಖಜಾಂಚಿ ಅಥಣಿ ವೀರಣ್ಣ, ಸದಸ್ಯರಾದ ಯಜಮಾನ್ ಮೋತಿ ವೀರಣ್ಣ, ಎಚ್.ಬಿ. ಗೋಣೆಪ್ಪ, ಬಿ.ಎಚ್. ವೀರಭದ್ರಪ್ಪ, ಜೋಗಪ್ಪನವರ ಕೊಟ್ರಬಸಪ್ಪ, ಸಾಳಂಕಿ ಉಮೇಶ್ ಸೇರಿದಂತೆ ಇತರರು ಇದ್ದರು. ಧರ್ಮದರ್ಶಿ ಗೌಡ್ರ ಚೆನ್ನಬಸಪ್ಪ ಇದ್ದರು.