Connect with us

Dvgsuddi Kannada | online news portal | Kannada news online

ಕರ್ನಾಟಕ ಬಯಲಾಟ ಗೌರವ, ವಾರ್ಷಿಕ ಪ್ರಶಸ್ತಿ ಪ್ರಕಟ; ದಾವಣಗೆರೆಯ ಚಂದ್ರಪ್ಪ, ರಾಮಪ್ರಭು ಆಯ್ಕೆ‌

Home

ಕರ್ನಾಟಕ ಬಯಲಾಟ ಗೌರವ, ವಾರ್ಷಿಕ ಪ್ರಶಸ್ತಿ ಪ್ರಕಟ; ದಾವಣಗೆರೆಯ ಚಂದ್ರಪ್ಪ, ರಾಮಪ್ರಭು ಆಯ್ಕೆ‌

ದಾವಣಗೆರೆ: 2021 ಹಾಗೂ 2022ನೇ ವರ್ಷದ ಕರ್ನಾಟಕ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ದಾವಣಗೆರೆಯ ಎಸ್. ಚಂದ್ರಪ್ಪ – ದೊಡ್ಡಾಟ(2021) ಜಿ. ರಾಮಪ್ರಭು- ಬಯಲಾಟ (2022) ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.

ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿ ಕೇಂದ್ರ ಕಚೇರಿಯು ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ಗೌರವ ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಒಳಗೊಂಡಿದ್ದರೆ, ವಾರ್ಷಿಕ ಪ್ರಶಸ್ತಿಯು 25 ಸಾವಿರ ರೂ.
ನಗದು ಹಾಗೂ ಪ್ರಶಸ್ತಿ ಒಳಗೊಂಡಿದೆ.

2021ನೇ ವರ್ಷದ ಪ್ರಶಸ್ತಿ ಪಡೆದವರು ಪಟ್ಟಿ

  • ಅನುಸೂಯಾ ವಡ್ಡರ-ಶ್ರೀಕೃಷ್ಣ ಪಾರಿಜಾತ (ವಿಜಯಪುರ).
  • ನರಸಪ್ಪ ಶಿರಗುಪ್ಪಿ-ಬಯಲಾಟ (ಬೆಳಗಾವಿ)
  • ವೀರಪ್ಪ ಬಿಸರಳ್ಳಿ- ದೊಡ್ಡಾಟ (ಕೊಪ್ಪಳ)
  • ಎಸ್.ಎ.ಕೃಷ್ಣಯ್ಯ-ತೊಗಲು ಗೊಂಬೆಯಾಟ (ಉಡುಪಿ)
  • ಗೋವಿಂದಪ್ಪ ತಳವಾರ- ದೊಡ್ಡಾಟ (ಹಾವೇರಿ)
  • 2021ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
  • ಸುಂದ್ರವ್ವ ಮೇತ್ರಿ – ಶ್ರೀಕೃಷ್ಣ ಪಾರಿಜಾತ (ಬಾಗಲಕೋಟೆ)
  • ಫಕ್ಕಿರಪ್ಪ ಗೌರಕ್ಕನವರ – ಬಯಲಾಟ (ಹಾವೇರಿ)
  • ಚಂದ್ರಶೇಖರ್ ಮೇಲಿನಮನಿ- ಶ್ರೀಕೃಷ್ಣ ಪಾರಿಜಾತ (ವಿಜಯಪುರ)
  • ದುಂಡಪ್ಪ ಗುಡ್ಲಾ – ಬಯಲಾಟ (ಕಲಬುರಗಿ)
  • ಚಂದ್ರಶೇಖರಯ್ಯ ಗುರಯ್ಯನವರ – ದೊಡ್ಡಾಟ (ಧಾರವಾಡ)
  • ಸುಶೀಲಾ ಮಾದರ – ಸಣ್ಣಾಟ (ಬೆಳಗಾವಿ)
  • ವೆಂಕೋಬ ಮುನಿಯಪ್ಪ – ದೊಡ್ಡಾಟ (ರಾಯಚೂರು)
  • ಎಸ್. ಚಂದ್ರಪ್ಪ – ದೊಡ್ಡಾಟ (ದಾವಣಗೆರೆ)
  • ಎಂ.ಆರ್.‌ವಿಜಯ -ಸೂತ್ರದ ಗೊಂಬೆಯಾಟ (ಬೆಂಗಳೂರು)
  • ದಾನಪ್ಪ ಹಡಪದ – ದೊಡ್ಡಾಟ (ಗದಗ)

 

  • 2022ನೇ ವರ್ಷದ ಗೌರವ ಪ್ರಶಸ್ತಿ ಪಡೆದವರ ಪಟ್ಟಿ
  • ಕೆ. ಮೌನಾಚಾರಿ- ಬಯಲಾಟ (ಬಳ್ಳಾರಿ)
  • ಸುರೇಂದ್ರ ಹುಲ್ಲಂಬಿ – ಸಣ್ಣಾಟ (ಧಾರವಾಡ)
  • ಮಲ್ಲೇಶಯ್ಯ ಶತಕಂಠ- ದೊಡ್ಡಾಟ (ತುಮಕೂರು)
  • ಚಂದ್ರಮ್ಮ – ತೊಗಲು ಗೊಂಬೆಯಾಟ (ಮಂಡ್ಯ)
  • ಅಶೋಕ ಸುತಾರ – ದೊಡ್ಡಾಟ (ಗದಗ)
  • 2022ನೇ ವರ್ಷದ ವಾರ್ಷಿಕ ಪ್ರಶಸ್ತಿ ಪಡೆದವರ ಪಟ್ಟಿ
  • ಮಲ್ಲಪ್ಪ ಗಣಿ- ಸಣ್ಣಾಟ (ಬಾಗಲಕೋಟೆ)
  • ಫಕ್ಕೀರೇಶ ಬಿಸೆಟ್ಟಿ- ದೊಡ್ಡಾಟ (ಹಾವೇರಿ)
  • ನಾಗರತ್ನಮ್ಮ- ಬಯಲಾಟ (ವಿಜಯನಗರ)
  • ಕೆಂಪಣ್ಣ ಚೌಗಲಾ- ಶ್ರೀಕೃಷ್ಣ ಪಾರಿಜಾತ (ಬೆಳಗಾವಿ)
  • ರಾಮಚಂದ್ರಪ್ಪ‌ ಕಟ್ಟಿಮನಿ- ದೊಡ್ಡಾಟ (ಯಾದಗಿರಿ)
  • ಅಂಬುಜಮ್ಮ ಸುಂಕಣ್ಣ- ಬಯಲಾಟ (ಬಳ್ಳಾರಿ)
  • ಕೆ.ಪಿ. ಭೂತಯ್ಯ- ದೊಡ್ಡಾಟ ( ಚಿತ್ರದುರ್ಗ)
  • ಜಿ. ರಾಮಪ್ರಭು- ಬಯಲಾಟ (ದಾವಣಗೆರೆ)
  • ಬಿ.ರತ್ನಮ್ಮ ಸೋಗಿ- ದೊಡ್ಡಾಟ (ಶಿವಮೊಗ್ಗ)
  • ಫಕ್ಕಿರಪ್ಪ ನೆರ್ತಿ- ದೊಡ್ಡಾಟ( ಧಾರವಾಡ)

 

Dvgsuddi.com is a live Kannada news portal. Kannada news online. political, Informative, Education, job, local (davangere), crime, agriculture, Sports News in Kannada. ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಜೊತೆ ಕೃಷಿ, ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top