ದಾವಣಗೆರೆ: ಶಾಂತಿ ಸಾಗರ ಕೆರೆಯಲ್ಲಿ ಪ್ರಸಕ್ತ ವರ್ಷದ ಮಳೆಗಾಲದ ಹಂಗಾಮಿಗೆ ನೀರು ಹರಿಸಲು ಕುಡಿಯುವ ನೀರು 779 ಎಂಸಿಎಫ್ಟಿ ಹೊರತು ಪಡಿಸಿ ಅರೆ ನೀರಾವರಿ ಮತ್ತು ತೋಟದ ಬೆಳೆಗೆ ಮಳೆಗಾಲದ ಹಂಗಾಮಿಗೆ ಅವಶ್ಯವಿರುವ 1003 ಎಂಸಿಎಫ್ಟಿ ಕೆರೆಯಲ್ಲಿ ನೀರಿನ ಲಭ್ಯತೆಯಿರುವುದರಿಂದ ನವೆಂಬರ್ 05 ರವರೆಗೆ ಸಿದ್ದನಾಲಾ-60ಕ್ಯೂಸೆಕ್ಸ್ ಮತ್ತು ಬಸವನಾಲಾ-45 ಕ್ಯೂಸೆಕ್ಸ್ನಂತೆ ನಿರಂತರವಾಗಿ ನೀರನ್ನು ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ.
ಪ್ರಸಕ್ತ ಮಳೆಗಾಲದ ಹಂಗಾಮಿನಲ್ಲಿ ರೈತ ಬಾಂಧವರು ಹೆಚ್ಚು ನೀರುಣ್ಣುವ ಬೆಳೆಯಾದ ಭತ್ತವನ್ನು ಬೆಳೆಯದೇ, ಅರೆ ನೀರಾವರಿ ಬೆಳೆಯನ್ನು ಮಾತ್ರ ಬೆಳೆಯಲು ಸೂಚಿಸಲಾಗಿದೆ. ಬೆಳೆ ಮಾದರಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ಕರ್ನಾಟಕ ನೀರಾವರಿ ಕಾಯ್ದೆ 1965ರ ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ. ರೈತರು ಸಹಕರಿಸಬೇಕೆಂದು ಭದ್ರಾ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



