ದಾವಣಗೆರೆ: ಕೆಯುಐಡಿಎಫ್ಸಿ ಇಲಾಖೆಯಿಂದ ದಾವಣಗೆರೆ ನಗರದಲ್ಲಿ ಜಲಸಿರಿ ಯೋಜನೆಯ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಕಾಮಗಾರಿ ಪೂರ್ಣಗೊಂಡ ವಿದ್ಯಾನಗರ, ಆಂಜನೇಯ ಬಡಾವಣೆ, ತರಳಬಾಳು ಬಡಾವಣೆ, ಸಿದ್ದವೀರಪ್ಪ ಬಡಾವಣೆಗಳಲ್ಲಿ ಸೆಪ್ಟೆಂಬರ್ 10 ರಂದು ಪೈಪ್ ಜೋಡಣಾ ಕಾರ್ಯ ನಡೆಯಲಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಯಾವುದೇ ತರಹದ ತೊಂದರೆಗಳು ಕಂಡುಬಂದಲ್ಲಿ( ಹೊಸ ನಳ ಸಂಪರ್ಕ ನೀಡದಿರುವುದು, ನಳದಲ್ಲಿ ನೀರು ಬಾರದಿರುವುದು ಮತ್ತು ಮನೆಗಳಿಗೆ ಅಳವಡಿಸಿದ ನಳ ಸಂಪರ್ಕದಲ್ಲಿ ನೀರು ಸೋರಿಕೆಯಾಗುತ್ತಿದ್ದು) ಜಲಸಿರಿ ಯೋಜನೆಯ ನಾಗರಿಕ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ 9036544419 ಗೆ ಕರೆ ಮಾಡಿ ತಮ್ಮ ಕುಂದು-ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



